ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಷಾ ಮಾಧ್ಯಮ : ಅರ್ಜಿ ತಳ್ಳಿ ಹಾಕಿದ ಹೈ ಕೋರ್ಟ್
ಇದರಿಂದ ಭಾಷಾ ನೀತಿಗೆ ಸ೦ಬಂಧಿಸಿದಂತೆ ಸುಪ್ರಿಂಕೋರ್ಟ್ ನಿಂದ ಪರಿಹಾರ ಪಡೆದುಕೊಳ್ಳುವ ರಾಜ್ಯ ಸರಕಾರದ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ನ್ಯಾಯಮೂರ್ತಿ ಎನ್ ಕುಮಾರ್ ಮತ್ತು ವೇಣುಗೋಪಾಲ ಗೌಡ ಅವರ ಪೀಠದ ಎದುರು ಹಾಜರಾದ ಸರಕಾರದ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅವರು ಭಾಷಾ ಮಾಧ್ಯಮ ವಿವಾದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿ ಇರುವುದರಿಂದ ಜುಲೈ 21 ರವರೆಗೆ ಕಾಲಾವಕಾಶ ನೀಡುವಂತೆ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಪೀಠ ಜುಲೈ 16ರ ಒಳಗೆ ನಿಲುವು ಸ್ಪಷ್ಟ ಪಡಿಸಬೇಕೆಂದು ಗಡುವು ನೀಡಿತು.
ಸೂಕ್ತ ಸಮಯದಲ್ಲಿ ಸಮಸ್ಯೆ ಬಗೆಹರಿಸಲು ಸರಕಾರ ವಿಫಲವಾಗಿದೆ. ಇದನ್ನು ರಾಜ್ಯದ ಜನತೆ ಕೂಡ ನೋಡುತ್ತಿದ್ದಾರೆ. ಹೀಗಿರುವಾಗ ಜನತೆಯೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತ ಪಡಿಸಿದರು.
(ದಟ್ಸ್ ಕನ್ನಡವಾರ್ತೆ)
Comments
bjp ಬಿಜೆಪಿ supreme court high court ಹೈಕೋರ್ಟ್ ವಿಶ್ವೇಶ್ವರ ಹೆಗಡೆ ಕಾಗೇರಿ sudhakar rao ಸುಧಾಕರ್ ರಾವ್ vishweshwara hegde kageri language policy kannada medium ಕನ್ನಡ ಮಾಧ್ಯಮ
Story first published: Tuesday, July 14, 2009, 10:24 [IST]