ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಉತ್ತರಾಧಿಕಾರಿ ಶತ್ರುಘ್ನ ಸಿನ್ಹಾ,?

By Staff
|
Google Oneindia Kannada News

Shaturgna Sinha
ಕಾನ್ಪುರ್, ಜು. 2 : ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ನಂತರ ಪಕ್ಷದ ನೇತೃತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಡ್ವಾಣಿ ಅವರ ಉತ್ತರಾಧಿಕಾರಿ ನಾನೇಕೆ ಆಗಬಾರದು ಎಂದು ಸಂಸದ ಕಮ್ ನಟ ಶತ್ರುಘ್ನ ಸಿನ್ಹಾ, ಥೇಟ್ ಸಿನಿಮಾ ವರಸೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಿರುವ ಸಂಗತಿ ಎಂದ ಅವರು, ಅಡ್ವಾಣಿ ಪಕ್ಷದಲ್ಲಿ ಎಲ್ಲರಿಂದಲೂ ಸ್ವೀಕರಿಸಲ್ಪಡುವ ನಾಯಕ. ಅವರ ನಂತರ ಪಕ್ಷವನ್ನು ಮುನ್ನೆಡೆಸುವ ನಾಯಕರು ಯಾರಾದರೂ ಆಗಬಹುದು. ಭಿನ್ನಮತವನ್ನು ಬಹಿರಂಗಪಡಿಸಿದ ಸಿನ್ಹಾ, ಚುನಾವಣೆಯ ನಂತರ ಕೆಲ ನಾಯಕರಿಗೆ ಭ್ರಮನಿರಶನವಾಗಿದೆ. ಆದ್ದರಿಂದ ಅವರೇ ಆಂತರಿಕ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಇಡುತ್ತಿದ್ದಾರೆ ಎಂದರು. ಯಶವಂತ್ ಸಿನ್ಹಾ, ಅರುಣ್ ಶೌರಿ, ಜಸ್ವಂತ್ ಸಿಂಗ್ ಎತ್ತಿರುವ ಪ್ರಶ್ನೆಗಳಿಗೆ ಪಕ್ಷ ಉತ್ತರ ಹುಡುಕಬೇಕಾಗಿದೆ ಎಂದು ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X