ಬೆಂಗಳೂರಿಗೆ ವಿಶೇಷ ಸೇನಾಪಡೆ : ಚಿದು
ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎನ್ ಎಸ್ ಜಿ ಘಟಕಗಳನ್ನು ಸ್ಥಾಪಿಸುತ್ತಿಲ್ಲ. ಬದಲಾಗಿ ನಮ್ಮ ಸುರಕ್ಷಿತ ದೃಷ್ಟಿಯಿಂದ ಎನ್ ಎಸ್ ಜಿ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಮುಂದಾಗಿದೆ. ಸಾಫ್ಟವೇರ್ ಕಂಪನಿಗಳ ತವರೂರು ಬೆಂಗಳೂರು ಮತ್ತು ಐತಿಹಾಸಿಕ ನಗರಿ ಜೋಧಪುರ್ ನಗರಗಳಿಗೆ ಭದ್ರತೆಗೆ ಸಂಬಂಧಿಸಿದಂತೆ ವಿಶೇಷ ಆದ್ಯತೆ ನೀಡಲಾಗಿದ್ದು, ನಿಪುಣ ಸೇನಾಪಡೆ, ಗೌಹಾತಿಯಲ್ಲಿ ಗಡಿ ನಿಯಂತ್ರಣ ಪಡೆಯನ್ನು ಸ್ಥಾಪಿಸಲಾಗುವುದು ಎಂದು ಚಿದಂಬರಂ ಹೇಳಿದರು.
ಈಗಾಗಲೇ ಗುರುವಾಂವ್, ಮುಂಬೈ, ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್ ನಲ್ಲಿ ಎನ್ಎಸ್ ಜಿ ಘಟಕಗಳನ್ನು ಸ್ಥಾಪಿಸಲಾಗಿದೆ. ದೇಶದ ಇತರೆ ಭಾಗಗಳಲ್ಲಿ ಘಟಕಗಳನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಲಾಗಿದೆ. ಅಗತ್ಯ ತಕ್ಕಂತೆ ಸಾಧಕ ಬಾಧಕಗಳನ್ನು ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ನವೆಂಬರ್ ತಿಂಗಳಲ್ಲಿ ನಡೆಯ ಮುಂಬೈ ಭಯೋತ್ಪಾದನೆಯಲ್ಲಿ ಎನ್ ಎಸ್ ಜಿ ತಂಡ ಗುರುವಾಂವ್ ನಿಂದ ಬರುವುದು ತುಂಬಾ ತಡವಾಗಿತ್ತು. ಇದರಿಂದ ಸರಕಾರ ತೀವ್ರ ಟೀಕೆಗೆ ಒಳಗಾಗಿತ್ತು.
(ಏಜನ್ಸೀಸ್)