ಕ್ರಿಯಾಶೀಲ ಯುವಪೀಳಿಗೆಗೊಂದು ಹೊಸ ಸ್ಪರ್ಧೆ
ಬೆಂಗಳೂರು, ಜೂ. 24: ನಾವು ಬಾಳುತ್ತಿರುವ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂದು ಹಾತೊರೆಯುತ್ತಿರುವ ಯುವ ಜನಾಂಗಕ್ಕೆ ಇಲ್ಲಿದೆ ಸೃಜನಶೀಲ ಅವಕಾಶ. ಯುವಕ/ತಿಯರು ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಮಾಜಿಕ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಪುರಸ್ಕೃತರಾಗಬಹುದು.
ಅರ್ಥಪೂರ್ಣ ಸಮಾಜ ಸೇವಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿರುವ ಬೆಂಗಳೂರಿನ ಸಮಾಜ ಸೇವಕರ ಸಮಿತಿ ತನ್ನ ವಾರ್ಷಿಕೋತ್ಸವವನ್ನು ಸಮಾಜ ಸೇವಕರ ದಿನಾಚರಣೆ ಎಂದು ಘೋಷಿಸಿ ಆಚರಿಸುತ್ತಾ ಬಂದಿದೆ.ಆಗಸ್ಟ್-1ರಂದು ಏಳನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾಮಾಜಿಕ ಅಭಿವೃದ್ಧಿಯ ಚಟುವಟಿಕೆ ಆಯೋಜನಾ ಸ್ಪರ್ಧೆಯನ್ನು ಶಿಕ್ಷಣ,ಪರಿಸರ,ಸಾಹಿತ್ಯ,ಕಲೆ,ಸಂಗೀತ ಮತ್ತು ಕ್ರೀಡೆ ಈ ಕ್ಷೇತ್ರಗಳಲ್ಲಿ ಏರ್ಪಡಿಸಿದೆ.
ಕೇವಲ 15 ದಿನಗಳಲ್ಲಿ,ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯರೂಪುಗೊಂಡು ಯಶಸ್ವಿಯಾದ 5 ಅತ್ಯುತ್ತಮ ಕಾರ್ಯಚಟುವಟಿಕೆಗಳಿಗೆ ಆಗ ಸ್ಟ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುತ್ತದೆ.ಆಸಕ್ತ ವ್ಯಕ್ತಿಗಳು/ಸಂಸ್ಥೆಗಳು ತಮ್ಮ ಸ್ವವಿವರಗಳೊಂದಿಗೆ ಸಮಿತಿಯನ್ನು ಸಂಪರ್ಕಿಸಬಹುದು.
1.ಶಿಕ್ಷಣ
ಕ್ಷೇತ್ರ
2.
ಪರಿಸರ
ನೈರ್ಮಲ್ಯ
ಮತ್ತು
ಸಂರಕ್ಷಣೆ
3.
ಸಾಹಿತ್ಯ,
ಸಂಗೀತ,
ಚಿತ್ರಕಲೆ.
4.
ಕ್ರೀಡೆ.
ನಿಯಮಗಳು:
1.
ಭಾಗವಹಿಸುವ
ವ್ಯಕ್ತಿ/ಸಂಸ್ಥೆಯು
ಅತ್ಯಂತ
ಕಡಿಮೆ
ಖರ್ಚಿನಲ್ಲಿ
ತಮ್ಮ
ಕಾರ್ಯ
ಯೋಜನೆಯನ್ನು
ಪೂರ್ಣಗೊಳಿಸಬೇಕು.
ಗರಿಷ್ಠ
ಖರ್ಚು
ರು1000
ಮಾತ್ರ
ಮಾಡಿರಬೇಕು.
2.
ಕೇವಲ
ಹದಿನೈದು
ದಿವಸಗಳೊಳಗಾಗಿ
ಈ
ಯೋಜನೆಯನ್ನು
ಕಾರ್ಯರೂಪಕ್ಕೆ
ತಂದಿರಬೇಕು.
3.
ಮೇಲ್ಕಂಡ
ನಿಬಂಧನೆಗಳಿಗೆ
ಬದ್ಧರಾಗಿರುವ
ಸಾಕ್ಷಿಗಾಗಿ
ಪುರಾವೆಗಳನ್ನು(ಛಾಯಾಚಿತ್ರ,ರಸಿತಿಗಳು)
ಹೊಂದಿರಬೇಕು.
4.
ಸಮಾಜ
ಸೇವಕರ
ಸಮಿತಿಯು
5
ಉತ್ತಮ
ಯೋಜನೆಗಳನ್ನು
ಗುರುತಿಸಿ
ಬಹುಮಾನವನ್ನು
ನಿರ್ಧರಿಸುತ್ತದೆ.
ಗರಿಷ್ಠ
ಖರ್ಚು
ಮಾಡಿರುವ
ಮೊಬಲಗನ್ನು
ಈ
ಐದು
ಬಹುಮಾನ
ವಿಜೇತರಿಗೆ
ಮಾತ್ರ
ಹಿಂತಿರುಗಿಸಲಾಗುತ್ತದೆ.
ಸಮಿತಿಯ
ನಿರ್ಧಾರವೇ
ಅಂತಿಮ.
5.ಪೂರ್ಣಗೊಂಡ
ಯೋಜನೆಯ
ವಿವರಗಳನ್ನು
ಸಮಿತಿಗೆ
ಸಲ್ಲಿಸುವ
ಕಡೆಯ
ದಿನಾಂಕ
15-ಜುಲೈ2009
6.
ಬಹುಮಾನಗಳನ್ನು
ಆಗಸ್ಟ್
-1
ರಂದು
ನಡೆಯುವ
ಕಾರ್ಯಕ್ರಮದಲ್ಲಿ
ನೀಡಲಾಗುವುದು.
7.
ಈ
ಸ್ಪರ್ಧೆಗೆ
ಯಾವುದೇ
ಪ್ರವೇಶ
ಧನ
ಇರುವುದಿಲ್ಲ.
ಸೂಚನೆ: ಅತ್ಯಂತ ಕಡಿಮೆ ಹಣ ಬಳಸಿ ಸೃಜನಶೀಲವಾಗಿ ಅಭಿವೃದ್ಧಿ ಕಾರ್ಯ ಎಂದು ತೋರಿಸುವ ಕ್ರಿಯಾಶೀಲರಿಗೆ ಆದ್ಯತೆ.
ಹೆಚ್ಚಿನ
ವಿವರಗಳಿಗಾಗಿ
ಸಂಪರ್ಕಿಸಿ:
ರಾಜಕುಮಾರ್
:9448171069
ರಾಘವೇಂದ್ರ
:98866
83008
ಅಂಚೆ
ವಿಳಾಸ:
ಸಮಾಜ
ಸೇವಕರ
ಸಮಿತಿ
171,
ಸುಬ್ಬರಾಮ
ಚೆಟ್ಟಿ
ರಸ್ತೆ,
ನೆಟ್ಟಕಲ್ಲಪ್ಪ
ಬಸ್
ನಿಲ್ದಾಣದ
ಹಿಂಭಾಗ,
ಬಸವನಗುಡಿ,
ಬೆಂಗಳೂರು
-
560004
ಈ-ಮೇಲ್
ವಿಳಾಸ
:
[email protected]
(ದಟ್ಸ್
ಕನ್ನಡ
ವಾರ್ತೆ)