ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಮೇಶ್ ಪೋಕ್ರಿಯಾಲ್ ಉತ್ತರಖಂಡ ಸಿಎಂ
ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯ 6 ಲೋಕಸಭೆ ಸ್ಥಾನಗಳನ್ನು ಬಿಜೆಪಿ ಸೋತಿತ್ತು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವಾಗಿದ್ದರಿಂದ ಸಹಜವಾಗಿ ಬಿಜೆಪಿ ಆರಿಸಿ ಬರುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಖಂಡೂರಿ ಅವರ ಆಡಳಿತ ವಿರೋಧಿಸಿದ್ದ ಉತ್ತರಖಂಡದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕುರಿತು ಆಂತರಿಕ ಬಂಡಾಯ ಆರಂಭವಾಗಿತ್ತು. ಎಲ್ಲ ಶಾಸಕರು ಖಂಡೂರಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹೇರಿದ್ದರು. ಇದರಿಂದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಖಂಡೂರಿ ಅವರ ರಾಜೀನಾಮೆಯನ್ನು ಪಡೆದುಕೊಂಡಿದ್ದರು.
(ಏಜನ್ಸೀಸ್)
Comments
Story first published: Thursday, June 25, 2009, 11:14 [IST]