ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಚ್ ಆರ್ ಭಾರದ್ವಾಜ್ ರಾಜ್ಯದ ನೂತನ ರಾಜ್ಯಪಾಲ
ರಾಜ್ಯಸಭಾ ಸದಸ್ಯರಾಗಿರುವ ಹಂಸರಾಜ್ ಭಾರದ್ವಾಜ್ ಅವರು ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಯುಪಿಎ ಸರಕಾರದಲ್ಲಿ ಮತ್ತೆ ಕೇಂದ್ರ ಸಚಿವರಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಭಾರದ್ವಾಜ್ ಅವರಿಗೆ ಸಚಿವ ಸ್ಥಾನ ನೀಡಲು ನಿರಾಕರಿಸಿತ್ತು. ಇದರಿಂದ ತುಸು ಅಸಮಾಧಾನಗೊಂಡಿದ್ದ ಭಾರದ್ವಾಜ್ ಅವರ ಕೋಪ ಶಮನ ಮಾಡಲು ಕರ್ನಾಟಕದ ರಾಜ್ಯಪಾಲರನ್ನಾಗಿ ಅವರನ್ನು ನೇಮಿಸಲಾಗಿದೆ.
ಮಧ್ಯಪ್ರದೇಶದ ರಾಜ್ಯಪಾಲರಾಗಿರುವ ಬಲರಾಮ್ ಜಾಖಡ್ ಅವರ ಅಧಿಕಾರವಧಿ ಮುಗಿದಿದ್ದರಿಂದ ಅವರ ಜಾಗಕ್ಕೆ ಕರ್ನಾಟಕದ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಅವರನ್ನು ವರ್ಗಾಯಿಸಲಾಗಿದೆ. ಅಸ್ಸಾಂನ ಮಾಜಿ ಸಚಿವ ದೇವಾನಂದ್ ಕನ್ವರ್ ಅವರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಿ ರಾಷ್ಟ್ರಪತಿ ಭವನದ ಕಚೇರಿಗಳು ತಿಳಿಸಿವೆ.
(ಏಜನ್ಸೀಸ್)
Comments
ಕಾಂಗ್ರೆಸ್ congress ಮನಮೋಹನ್ ಸಿಂಗ್ manmohan singh ಕರ್ನಾಟಕ karnataka ಯುಪಿಎ upa ರಾಜ್ಯಪಾಲ law minister ಕಾನೂನು ಸಚಿವ ಹಂಸರಾಜ್ ಭಾರದ್ವಾಜ್ hansraj bhardwaj
Story first published: Wednesday, June 24, 2009, 17:48 [IST]