ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 27 ರಂದು ಪಿಬಿಎಸ್ ರಸಸಂಜೆ

By Staff
|
Google Oneindia Kannada News

PB Srinivas
ಬೆಂಗಳೂರು, ಜೂ. 23 : 'ನಾ ಕಂಡ ಬೆಂಗಳೂರು' ವಾರಪತ್ರಿಕೆಯು ಜೂನ್ 27 (ಶನಿವಾರ) ರಂದು ನಗರದ ಬಸವನಗುಡಿ ಕೋಹಿನೂರ್ ಆಟದ ಮೈದಾನದಲ್ಲಿ ಖ್ಯಾತ ಗಾಯಕ ಪಿ ಬಿ ಶ್ರೀನಿವಾಸ್ ಅವರ ರಸಸಂಜೆ ಕಾರ್ಯಕ್ರಮ ಆಯೋಜಿಸಿದೆ. ಸ೦ಜೆ 6.30 ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪಿಬಿಎಸ್ ಹಾಡಿದ 60 ರಿ೦ದ 70ರ ದಶಕದಲ್ಲಿ ತೆರೆಕಂಡ ಹಳೆಯ ಚಿತ್ರಗೀತೆಗಳನ್ನು ಖ್ಯಾತ ಗಾಯಕ, ಗಾಯಕಿಯರು ಹಾಡುವ ಮೂಲಕ ಸಭಿಕರನ್ನು ಮನರಂಜಿಸಲಿದ್ದಾರೆಂದು ಪತ್ರಿಕೆ ಸಂಪಾದಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಗಾಯಕರಾದ ರಮೇಶ್ ಚಂದ್ರ, ಪಂಚಮ ಹಳಿಬಂಡಿ, ಗಣೇಶ್ ಪ್ರಸಾದ್, ದಿವ್ಯಾ ರಾಘವನ್ ಮುಂತಾದವರು ಈ ರಸಸಂಜೆ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಇಂದಿನ ಯುವ ಪೀಳಿಗೆಗೆ ಹಳೆಯ ಹಾಡಿನ ಪರಿಕಲ್ಪನೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ರಸಸಂಜೆ ಕಾರ್ಯಕ್ರಮದಲ್ಲಿ ಸಚಿವ ಅರವಿಂದ ಲಿಂಬಾವಳಿ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅನಿಲ್ ಕುಮಾರ್ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X