ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹೀಂದ್ರ ಸತ್ಯಂ ಕಂಪನಿಗೆ ಗುರ್ನಾನಿ ನೂತನ ಸಿಇಒ

By Staff
|
Google Oneindia Kannada News

CP Gurmani
ಹೈದರಾಬಾದ್, ಜೂ. 23 : ಹರಗಣದಿಂದ ತತ್ತರಿಸಿದ್ದ ಸತ್ಯಂ ನೂತನವಾಗಿ ಮಹೀಂದ್ರ ಸತ್ಯಂ ಎಂದು ಹೊಸರೂಪ ಪಡೆದುಕೊಂಡ ನಂತರ ಅದಕ್ಕೆ ಹೊಸ ಮುಖ್ಯಸ್ಥರನ್ನು ಟೆಕ್ ಮಹೀಂದ್ರ ಆಡಳಿತ ಮಂಡಳಿ ನೇಮಿಸಿದೆ. ಟೆಕ್ ಮಹೀಂದ್ರ ಕಂಪನಿ ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥರಾಗಿದ್ದ ಸಿ ಪಿ ಗುರ್ನಾನಿ ಅವರನ್ನು ಮಹಿಂದ್ರಾ ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಟೆಕ್ ಮಹಿಂದ್ರ ಸಿಇಒ ವಿನೀತ್ ನಯ್ಯರ್ ತಿಳಿಸಿದ್ದಾರೆ.

ಸತ್ಯಂ ಕಂಪನಿ ರಾಮಲಿಂಗರಾಜು ಅವರ ಗೋಲ್ ಮಾಲ್ ಗೆ ಒಳಗಾದ ನಂತರ ಕೇಂದ್ರ ಸರಕಾರ ಸಮಿತಿ ರಚಿಸಿ ಅದರ ವಶಕ್ಕೆ ನೀಡಿತ್ತು. ನಂತರ ಟೆಕ್ ಮಹಿಂದ್ರ ಕಂಪನಿ ಸತ್ಯಂ ಕಂಪನಿಯನ್ನು ಖರೀದಿಸಿದ ನಂತರ ಅದಕ್ಕೆ ತಾತ್ಕಾಲಿಕವಾಗಿ ಎ ಎಸ್ ಮೂರ್ತಿ ಎಂಬುವವರನ್ನು ಸಿಇಒ ಆಗಿ ನೇಮಿಸಲಾಗಿತ್ತು. ಟೆಕ್ ಮಹಿಂದ್ರ ಹಣಕಾಸು ಮುಖ್ಯಸ್ಥರಾಗಿ ಮಹಿಂದ್ರ ಅಂಡ್ ಮಹಿಂದ್ರ ಗ್ರೂಫ್ ನ ಉಪಾಧ್ಯಕ್ಷರಾಗಿರುವ ಸುಬ್ರಮಣ್ಯ ದುರ್ಗಾಶಂಕರ್ ಅವರ ಆಯ್ಕೆಯಾಗುವ ಸಾಧ್ಯತೆಗಳಿವೆ. ಇಂದು ಸಂಜೆ ವೇಳೆಗೆ ಮಹಿಂದ್ರ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರ ಅದಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X