ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಖಂಡ ಮುಖ್ಯಮಂತ್ರಿ ಖಂಡೂರಿ ರಾಜೀನಾಮೆ
ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವಲ್ಲಿ ಖಂಡೂರಿ ವಿಫಲರಾಗಿದ್ದರು. ಇಂದು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ನಿವಾಸದಲ್ಲಿ ನಡೆದ ಬಿಜೆಪಿ ಮಹತ್ವದ ಸಭೆಯಲ್ಲಿ ಖಂಡೂರಿ ಅವರ ರಾಜೀನಾಮೆ ಪಡೆಯುವ ನಿರ್ಧಾರ ಕೈಗೊಳ್ಳಲಾಯಿತು. ಖಂಡೂರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಜನಾಥ್ ಸಿಂಗ್ ಸೂಚಿಸಿದ್ದರು.
ಉತ್ತರಖಂಡದ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಾರಿ ಲಾಬಿ ನಡೆಯುತ್ತಿದ್ದು, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಕಾಶ್ ಪಂತ್ ಮತ್ತು ಆರೋಗ್ಯ ಸಚಿವ ರಮೇಶ್ ಪೋಕ್ರಿಯಾಲ್ ಅವರ ಹೆಸರು ಪ್ರಮುಖವಾಗಿ ಕೇಳಿಬರತೊಡಗಿವೆ. ಸೋಲಿನ ಹೊಣೆ ಹೊತ್ತುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಇನ್ನೊಬ್ಬ ಮುಖಂಡ ಬಿ ಎಸ್ ಕೋಶಿಯಾರಿ ಅವರ ಖಂಡೂರಿ ವಿರುದ್ಧ ಬಂಡಾಯವೆದ್ದು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ಆದೇಶದ ಮೇರೆಗೆ ಶುಕ್ರವಾರ ತಮ್ಮ ರಾಜೀನಾಮೆ ವಾಪಸ್ಸು ಪಡೆದುಕೊಂಡಿದ್ದರು.
(ಏಜನ್ಸೀಸ್)
Comments
bjp ಬಿಜೆಪಿ lk advani ಎಲ್ ಕೆ ಅಡ್ವಾಣಿ uttarakhand lok sabha election 2009 rajnath singh ರಾಜನಾಥ್ ಸಿಂಗ್ ಲೋಕಸಭೆ ಚುನಾವಣೆ 2009
Story first published: Tuesday, June 23, 2009, 16:12 [IST]