ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಶೋಕ್ ಹಾರನಹಳ್ಳಿ ನೂತನ ಎಜಿ
ಬೆಂಗಳೂರು, ಜೂ. 23 : ಉದಯ್ ಹೊಳ್ಳ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಸ್ಥಾನಕ್ಕೆ ಅಶೋಕ ಹಾರನಹಳ್ಳಿ ಅವರ ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸೋಮವಾರ ಅಶೋಕ ಹಾರನಹಳ್ಳಿ ಅವರ ರಾಜ್ಯದ ಅಡ್ವೋಕೇಟ್ ಜನರಲ್ ಎಂಬ ಆದೇಶವನ್ನು ಹೊರಡಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಉದಯ್ ಹೊಳ್ಳ ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೇ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಬಿಜೆಪಿ ಸರಕಾರ ನೇಮಿಸಿತ್ತು. ಅದು ಕೂಡಾ ಹೊಳ್ಳ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಶೋಕ್ ಹಾರನಹಳ್ಳಿ ಅವರು ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಮಗನಾಗಿದ್ದಾರೆ. ಕಳೆದ 25 ವರ್ಷಗಳಿಂದ ರಾಜ್ಯ ಹೈಕೋರ್ಟ್ ನಲ್ಲಿ ನ್ಯಾಯಾವಾದಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಆಗಿದ್ದ ಬಿ ವಿ ಆಚಾರ್ಯ ಅವರ ಕೈಯಲ್ಲಿ ಅಶೋಕ್ ಹಾರನಹಳ್ಳಿ ಅನುಭವ ಪಡೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಯಡಿಯೂರಪ್ಪ ರಾಮೇಶ್ವರ ಠಾಕೂರ್ rameshwar takur advocate general ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ
Story first published: Tuesday, June 23, 2009, 12:48 [IST]