ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನದಿಯಲ್ಲಿ ತೆಪ್ಪ ಮುಳುಗಿ 9 ಸಾವು ?
ಮುಂಡರಗಿ, ಜೂ. 22 : ಬಲವಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಎರಡು ತೆಪ್ಪಗಳು ಮುಳುಗಿದ್ದರಿಂದ 9 ಮಂದಿ ಮೃತಪಟ್ಟಿದ್ದು, 3 ಮಂದಿ ಮಹಿಳೆಯರು ನಾಪತ್ತೆಯಾಗಿರುವ ದಾರುಣ ಘಟನೆ ಮುಂಡರಗಿ ತಾಲ್ಲೂಕು ವಿಟ್ಲಾಪುರ ಬಳಿ ಇರುವ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಹೂವಿನ ಹಡಗಲಿ ತಾಲ್ಲೂಕು ಮಾಗಳ ಗ್ರಾಮದಿಂದ ಮುಂಡರಗಿ ತಾಲ್ಲೂಕು ವಿಟ್ಲಾಪುರಕ್ಕೆ ತೆರಳತ್ತಿದ್ದ ಎರಡು ತೆಪ್ಪದಲ್ಲಿ ಸುಮಾರು 15 ಮಂದಿ ಇದ್ದರು. ಬಲವಾಗಿ ಗಾಳಿ ಬೀಸಿದ್ದರಿಂದ ತೆಪ್ಪ ನೀರಿನಲ್ಲಿ ಮುಳುಗಿಹೋಗಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಮೂವರು ಈಜಿ ದಡ ಸೇರಿದ್ದಾರೆ. ಉಳಿದ ಮೂವರು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, June 22, 2009, 18:33 [IST]