For Daily Alerts
ರಾಷ್ಟ್ರೀಯ ಉದ್ಯೋಗ ಯೋಜನೆ, ಅಡ್ವಾಣಿ ಚಾಲನೆ
ಬೆಂಗಳೂರು ಜೂ 20: ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಗೆ ಬಿಜೆಪಿಯ ಹಿರಿಯ ಮುಖಂಡ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್ ಕೆ ಆಡ್ವಾಣಿ ಆಗಸ್ಟ್ 15 ರಂದು ನಗರದಲ್ಲಿ ಚಾಲನೆ ನೀಡಲಿದ್ದಾರೆ.
ನಿರುದ್ಯೋಗ ಮಂದಿಗೆ ಮನೆಯಲ್ಲಿಯೇ ಕುಳಿತು ಕಾರ್ಯನಿರ್ವಹಿಸುವ ಪಂಚವಾರ್ಷಿಕ ಯೋಜನೆ ಇದಾಗಿದ್ದು ಈ ಯೋಜನೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಬಿಜೆಪಿಯ ರಾಷ್ಟ್ರೀಯ ಮುಖಂಡರುಗಳು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.
ಡ್ರೈಫುಡ್ ತಯಾರಿಕೆ ಮಾಡುವ ಯೋಜನೆಯಾದ ರಾಷ್ಟ್ರೀಯ ಉದ್ಯೋಗ ಯೋಜನೆಯ ಮೂಲಕ ಪ್ರತಿದಿನ 300 ರೂ.ಗಳ ವೇತನವನ್ನು ನೀಡಲಾಗುವುದು ಎಂದು ಮಹಾತ್ಮಗಾಂಧಿ ಟ್ರಸ್ಟ್ ಅಧ್ಯಕ್ಷ ಎಚ್ ಎಂ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Story first published: Saturday, June 20, 2009, 11:57 [IST]