ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಾಯಣ ನಿರ್ದೇಶಕಿಯಾಗಿ ಬಿ. ಜಯಶ್ರೀ

By Staff
|
Google Oneindia Kannada News

ಮೈಸೂರಿನಲ್ಲಿರುವ ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕಿಯಾಗಿ ಹಿರಿಯ ರಂಗಕರ್ಮಿ, ಗಾಯಕಿ ಬಿ. ಜಯಶ್ರೀ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಚಿದಂಬರ ರಾವ್ ಜಂಬೆ ಅವರ ಅವಧಿ (ಜ.18, 2008)ಪೂರ್ಣವಾದ ಬಳಿಕ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಹುದ್ದೆ ಖಾಲಿಯಾಗಿತ್ತು.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅನೇಕ ಹೆಸರುಗಳು ಕೇಳಿ ಬಂದವಾದರೂ ಅಂತಿಮವಾಗಿ ಸರ್ಕಾರ ಜಯಶ್ರೀ ಅವರನ್ನು ನೇಮಕ ಮಾಡಿದೆ. ಈ ಬಾರಿ ಮಹಿಳಾ ನಿರ್ದೇಶಕರನ್ನೇ ರಂಗಾಯಣಕ್ಕೆ ನೇಮಕ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಜಯಶ್ರೀ, ವಿಜಯಮ್ಮ, ಮಾಲತಿ ಸುಧೀರ್ ಹೆಸರು ಚರ್ಚೆಗೆ ಬಂದಿದ್ದವು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X