ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮೂಲದ ಐಬಿಎಂ ಟೆಕ್ಕಿ ಆತ್ಮಹತ್ಯೆ

By Staff
|
Google Oneindia Kannada News

 IBM techie commits suicide in Hyderbad
ಹೈದರಾಬಾದ್, ಜೂ. 17 : ಜೀವನದಲ್ಲಿ ಜಿಗುಪ್ಸೆಗೊಂಡು ಬೆಂಗಳೂರು ಮೂಲದ ಐಬಿಎಂ ಕಂಪನಿಯ ಸಾಫ್ಟವೇರ್ ಇಂಜಿನಿಯರ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಲ್ಲಿನ ಕಾಚಗೂಡ್ ನಲ್ಲಿರುವ ದೇವಸ್ಥಾನವೊಂದರ ಬಳಿ ನಡೆದಿದೆ. ಪ್ರದೀಪ್ ಎಂಬ ಸಾಫ್ಟವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ.

ತಂದೆ-ತಾಯಿಗಳ ಆಸೆಗಳನ್ನು ಈಡೇರಿಸಲಿಕ್ಕೆ ಆಗಲಿಲ್ಲ. ಅವರು ನಿರೀಕ್ಷಿಸದ ಮಟ್ಟಕ್ಕೆ ಬೆಳೆಯಲಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವೆ ಎಂದು ಪೊಲೀಸ್ ಹಾಗೂ ಪೋಷಕರರಿಗೆ ಪತ್ರ ಬರೆದಿಟ್ಟು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಉತ್ತಮ ಕೆಲಸದಲ್ಲಿ ಆಗಿದ್ದ ಪ್ರದೀಪ್ ನಿರೀಕ್ಷಿಸದ ಮಟ್ಟಕ್ಕೆ ಬೆಳಯಲಾಗಲಿಲ್ಲ ಎಂದು ಪತ್ರ ಬರೆದಿಟ್ಟು ಪ್ರಾಣ ಕಳೆದುಕೊಂಡಿರುವುದು ಆಶ್ಚರ್ಯ ಹಾಗೂ ಆತಂಕ ತರಿಸುವ ಸಂಗತಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X