ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನ ಶೈಲಿ ಬದಲಾಯಿಸಿಕೊಳ್ಳಿ : ರಾಘವೇಂದ್ರ

By Staff
|
Google Oneindia Kannada News

B Y Raghavendra
ಶಿವಮೊಗ್ಗ, ಜೂ. 16 : ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಹಿರಿಯರು ಎನ್ನುವ ಕಾರಣಕ್ಕೆ ಇದುವರೆಗೂ ಗೌರವ ನೀಡುತ್ತಲೇ ಬಂದಿದ್ದೇನೆ. ಅವರ ಮಾತಿನ ಶೈಲಿ ಬದಲಿಸಿಕೊಳ್ಳದಿದ್ದರೆ ನಾನೂ ಕೂಡ ನನ್ನ ವರಸೆಯನ್ನು ಬದಲಿಸಬೇಕಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಅವರ ಮಗ ಶಿವಮೊಗ್ಗ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಸೋಮಿನಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಗೆಲ್ಲಲು 100 ಕೋಟಿ ರುಪಾಯಿ ಖರ್ಚು ಮಾಡಿದೆ. ಹಣ, ಹೆಂಡ ಹಂಚಿದೆ ಎಂದು ಬಂಗಾರಪ್ಪ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ರಾಘವೇಂದ್ರ ಈ ರೀತಿ ಉತ್ತರಿಸಿದರು. ಬಂಗಾರಪ್ಪ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಚುನಾವಣೆ ವೇಳೆಯಲ್ಲಿ ಕೂಡಾ ಅಪ್ಪಿತಪ್ಪಿಯೂ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಬ್ಬರು ಗೆದ್ದಾಗ ಇನ್ನೊಬ್ಬರು ಸೋಲಬೇಕು. ಜನರು ನೀಡಿದ ತೀರ್ಪನ್ನು ಗೌರವಿಸಬೇಕು. ಅವರು ಸೋತಿದ್ದಾರೆ. ಇದನ್ನು ಗೌರವವಾಗಿ ಒಪ್ಪಿಕೊಂಡು ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡಲಿ ಎಂದು ರಾಘವೇಂದ್ರ ಹೇಳಿದರು.

ಜನತೆ ಅವರು ಎಲ್ಲಿ ಕೂರಬೇಕು ಎಂಬುದನ್ನು ತೋರಿಸಿದ್ದಾರೆ. ಅದನ್ನು ಬಿಟ್ಟು ತಮ್ಮ ಕುರಿತು ಇನ್ನೂ ಲಘು ಧಾಟಿಯಲ್ಲಿ ಮಾತನಾಡುವುದನ್ನು ಬಿಡದಿದ್ದರೆ, ನಾನು ಕೂಡಾ ನನ್ನ ವರಸೆಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X