ಉಗ್ರರ ವಿರುದ್ಧ ಸಿಡಿದೆದ್ದ ಮನಮೋಹನ್ ಸಿಂಗ್
ಎರಡನೇ ಬಾರಿಗೆ ಯುಪಿಎ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವ ಸಿಂಗ್, ರಷ್ಯಾದಲ್ಲಿ ನಡೆಯುತ್ತಿರುವ ಆರು ರಾಷ್ಟ್ರಗಳ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ತೆರಳಿದ್ದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಿ ಆಸೀಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪಾಕ್ ನಲ್ಲಿಬೀಡುಬಿಟ್ಟಿರುವ ಉಗ್ರರ ಜಾಲವನ್ನು ನಾಶಪಡಿಸುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿರುವ ಪ್ರಧಾನಿ ಅವರು, ಭಯೋತ್ಪಾದಕರ ಬಗ್ಗೆ ಪಾಕಿಸ್ತಾನ ಮೃದುಧೋರಣೆ ತಾಳಿರುವುದು ಅತ್ಯಂತ ಅತ್ಯಂತ ಅಸಮಾಧಾನ ತರುವಂತ ಸಂಗತಿಯಾಗಿದೆ ಎಂದು ನೇರವಾಗಿ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಭಾರತದ ಮುಂಬೈನಲ್ಲಿ ನಡೆದ ಭಯೋತ್ಪಾದನೆ ಸಂಬಂಧಿಸಿದಂತೆ ನೇರ ಕೈವಾಜ ಹೊಂದಿರುವ ಜಮಾತೆ ಉದ್ ದವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯ್ಯದ್ ನನ್ನು ಬಿಡುಗಡೆಗೊಳಿಸಿರುವುದಕ್ಕೆ ಭಾರತಕ್ಕೆ ತೀವ್ರ ನಿರಾಶೆ ಉಂಟು ಮಾಡಿದೆ ಎಂದ ಸಿಂಗ್, ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ಎಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಿದರೂ ಪಾಕಿಸ್ತಾನ ಯಾವ ಕ್ರಮಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.
(ಏಜನ್ಸೀಸ್)