ಶಿವಮೊಗ್ಗದಲ್ಲಿ ಚಿಕುನ್ಗುನ್ಯಾ : 8 ಪ್ರಕರಣಗಳು ಪತ್ತೆ
ಶಿವಮೊಗ್ಗ, ಜೂ. 15 : ನೂತನ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಜಿ. ಕುಮಾರಸ್ವಾಮಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ತಿಪ್ಪೇಶಿರವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಕೊಮ್ಮನಾಳು, ಸೋಮಿನಕೊಪ್ಪ, ಹಾಡೋನಹಳ್ಳಿ ಹಾಗೂ ಬನ್ನಿಕೆರೆ ಗ್ರಾಮಗಳಿಗೆ ಭೇಟಿ ನೀಡಿ ಚಿಕುನ್ ಗುನ್ಯಾ ಕಾಯಿಲೆಗೆ ಸಂಬಂಧಿಸಿದಂತೆ ಚರ್ಚಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 360 ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ಸೊಳ್ಳೆಗಳಿಂದ ಮತ್ತೆ ಚಿಗಿತುಕೊಂಡಿರುವ ಚಿಕುನ್ ಗುನ್ಯಾ ಕಾಯಿಲೆಯಿಂದ ಸಾಕಷ್ಟು ರೋಗಿಗಳು ತೀವ್ರತರದ ಯಾತನೆಯನ್ನು ಅನುಭವಿಸುವಂತಾಗಿದೆ.
ಈ ಜ್ವರದ ಪ್ರಕರಣಗಳಿಗೆ ಸಂಬಂಧಿಸಿದಂತೆ ರೋಗಿಗಳನ್ನು ಚಿಕಿತ್ಸೆಗೊಳಪಡಿಸಿ ಸೂಕ್ತ ಔಷಧೋಪಚಾರ ಮಾಡಲಾಗುತ್ತಿದೆ. ಇದರೊಂದಿಗೆ 8 ಪ್ರಕರಣಗಳು ಮಾತ್ರ ಪತ್ತೆ ಹಚ್ಚಲಾಗಿದ್ದು, ಚಿಕುನ್ ಗುನ್ಯಾ ಶಿವಮೊಗ್ಗದಲ್ಲಿ ಹಬ್ಬದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ತಿಪ್ಪೇಶಿ ತಿಳಿಸಿದ್ದಾರೆ.
ಈ ತಂಡದಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಹೆಚ್.ಸಿ. ಬಸವರಾಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.