ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಶಾಲೆ ದತ್ತು ಪಡೆಯಲು ಕರವೇ ಕಂಕಣ
ಬೆಂಗಳೂರು, ಜೂ.13: ಕನ್ನಡಿಗರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿನ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದೆ. ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ 43ನೇ ಜನ್ಮದಿನಚಾರಣೆಯಂದು ಕನ್ನಡ ಶಾಲೆಗಳನ್ನು ದತ್ತು ಪಡೆದು ಹೈಟೆಕ್ ಮಾದರಿ ಶಾಲೆಗಳನ್ನಾಗಿ ಮಾಡುವ ದೀಕ್ಷೆಯನ್ನು ಕಾರ್ಯಕರ್ತರು ತೊಟ್ಟಿದ್ದಾರೆ.
ಬೆಳಗಾವಿ, ರಾಯಚೂರು, ಗುಲ್ಬರ್ಗ, ಬೀದರ್, ಚಾಮರಾಜನಗರ, ಬಳ್ಳಾರಿ, ಬೆಂಗಳೂರು ನಗರದ ಶ್ರೀರಾಂಪುರ, ಹಲಸೂರು ಮತ್ತು ಡಿ ಜಿ ಹಳ್ಳಿ ಮುಂತಾದ ಕಡೆ ಕನ್ನಡಿಗರು ಹೆಚ್ಚಾಗಿ ವಾಸಿಸುವ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು. ಈ ಮೂಲಕ ನಾರಾಯಣ ಗೌಡರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ನಗರ ಜಿಲ್ಲೆಯ ಕಾರ್ಯಕರ್ತರು ನಿರ್ಧರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಗುಲ್ಬರ್ಗ ಬೆಳಗಾವಿ ಕರವೇ rakshana vedike krv ಟಿ ಎ ನಾರಾಯಣ ಗೌಡ ta narayana gowda ಬಳ್ಳಾರಿ ಹಲಸೂರು kannada medium schools
Story first published: Saturday, June 13, 2009, 12:46 [IST]