ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಸಮರ್ಥ ಸಚಿವರು : ಮತ್ತೆ ಕೆಣಕಿದ ರೇಣುಕಾಚಾರ್ಯ
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಅಸಮರ್ಥ ಸಚಿವರನ್ನು ಕೈಬಿಡಬೇಕು ಎನ್ನುವ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಈ ಇಬ್ಬರು ಶಾಸಕರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಕೆಲವು ಸಚಿವರು ಯಡಿಯೂರಪ್ಪನವರ ವೇಗಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇತ್ತ ಶಾಸಕರಿಗೂ ಸ್ಪಂದಿಸುತ್ತಿಲ್ಲ. ಇಂತಹ ಅಸಮರ್ಥರಿಂದ ಸರಕಾರಕ್ಕೆ ಕೆಟ್ಟ ಹೆಸರು. ಅವರನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಯಾರನ್ನು ಕೈಬಿಡಬೇಕು ಎಂಬುದನ್ನು ಈಗಾಗಲೇ ತಿಳಿಸಿದ್ದೇವೆ. ಉಳಿದ ಬೇಡಿಕೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ವಿರುದ್ಧ ನಾವು ಅಪಸ್ವರ ಎತ್ತಿಲ್ಲ. ಮಂತ್ರಿಗಿರಿಯನ್ನು ಕೇಳಿಲ್ಲ. ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಕೊಡುವುದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ. ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ಉಭಯ ಶಾಸಕರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಯಡಿಯೂರಪ್ಪ ಕನ್ನಡ ಜನಾರ್ದನ ರೆಡ್ಡಿ ಭಿನ್ನಮತ ks eshwarappa ಕೆಎಸ್ ಈಶ್ವರಪ್ಪ janardhana reddy renukacharya ಬೇಳೂರು ಗೋಪಾಲಕೃಷ್ಣ dissidence ಎಂಪಿ ರೇಣುಕಾಚಾರ್ಯ beluru gopalkrishna
Story first published: Thursday, June 11, 2009, 11:57 [IST]