ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಭಯೋತ್ಪಾದನೆಗೆ ಭಾರತ ಕಾರಣ

By Staff
|
Google Oneindia Kannada News

Shah Qureshi
ಇಸ್ಲಾಮಾಬಾದ್, ಜೂ. 11 : ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರು ಭಯೋತ್ಪಾದನೆಯಲ್ಲಿ ಭಾರತದ ಗೂಡಚರ್ಯೆ ಸಂಸ್ಥೆ ರಾ (ರಿಸರ್ಚ್ ಅಂಡ್ ಎನಲೀಸಸ್ ವಿಂಗ್) ಕೈವಾಡವಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಸೂದ್ ಖುರೇಶಿ ಆರೋಪಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಪಾಕಿಸ್ತಾದ ವಿವಿಧ ಕಡೆಗಳಲ್ಲಿ ಭಯೋತ್ಪಾದನೆ ಕೃತ್ಯಗಳು ನಡೆದಿದ್ದು, ಭಾರತದ ಕೈವಾಡದ ಶಂಕೆ ಎದ್ದು ಕಾಣಿತೊಡಿಗಿದೆ ಎಂದು ಅವರ ಹೇಳಿದ್ದಾರೆ.

ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿರುದಂತೂ ಸುಳ್ಳಲ್ಲ ಎಂದರು. ಪಾಕಿಸ್ತಾನ ಶಾಂತಿ ಬಯಸುತ್ತಿದೆ. ಭಾರತ ಅದಕ್ಕೆ ಸಹಕಾರ ನೀಡಬೇಕು ಎಂದ ಖುರೇಶಿ, ಪಕ್ಕ ದೇಶಗಳೊಂದಿಗೆ ಸ್ನೇಹದಿಂದಲರು ಪಾಕ್ ಸರಕಾರ ಎದುರು ನೋಡುತ್ತಿದೆ ಎಂದರು.

ತಾಲಿಬಾನ್ ನಲ್ಲಿ ಪಾಕ್ ಸರಕಾರ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಅಲ್ಲಿನ ಜನರು ಸಹಾಯ ಸಹಕಾರವಿದೆ. ಅಂತಾರಾಷ್ಟ್ರೀಯ ಮಟ್ಟದಿಂದಲೂ ಕೂಡಾ ಬೆಂಬಲ ದೊರೆತ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆಯನ್ನು ಮುಂದುವರೆಯಲಾಗಿದೆ. ಅಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಮೆಹಸೂದ್ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X