ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಅಭಿನಂದನೆ
ಬೆಂಗಳೂರು, ಜೂ. 8: ಪ್ರತಿ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಬಿ.ಎಸ್. ಯಡಿರೂಪ್ಪ ಅವರು ಅಭಿನಂದಿಸಿದರು. ಹಾಗೂ ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಶುಭಕೋರಿದರು.
'ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ ಜೊತೆಗೆ, ಸದನದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಾರೆಂಬ ವಿಶ್ವಾಸಹೊಂದಿರುವುದಾಗಿ' ಮುಖ್ಯ ಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ವಿಕಾಸ ಸಂಕಲ್ಪ ಉತ್ಸವ ರಾಜ್ಯದಾದ್ಯಂತ ಮುಂದುವರೆಯುವುದು ಎಂದು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡವಾರ್ತೆ)
Comments
bjp ಬಿಜೆಪಿ ಕಾಂಗ್ರೆಸ್ congress ಯಡಿಯೂರಪ್ಪ ಕೆಪಿಸಿಸಿ ಸಿದ್ದರಾಮಯ್ಯ karnataka assembly opposition leader ಕರ್ನಾಟಕ ವಿಧಾನಸಭೆ ಅಸೆಂಬ್ಲಿ ಪ್ರತಿಪಕ್ಷ ನಾಯಕ
Story first published: Monday, June 8, 2009, 11:15 [IST]