ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ
ಬಂಡೀಪುರ ರಾಷ್ಟ್ರೀಯ ಅಭಯಾರಣ್ಯವನ್ನು ಭಾರತ ಸರ್ಕಾರವು 1989ರಲ್ಲಿ ರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿದ್ದು, ಈ ಅಭಯಾರಣ್ಯವು ತಮಿಳುನಾಡಿನ ನೀಲಗಿರಿ, ಮಧುಮಲೈ ಅರಣ್ಯ ಪ್ರದೇಶ, ಕೇರಳ ರಾಜ್ಯದ ವೈನಾಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ನಾಗರಹೊಳೆ ಅಭಯಾರಣ್ಯದವರೆಗೆ ವಿಸ್ತರಿಸಿದೆ.
ಈ ಅರಣ್ಯದ ಗಡಿ ಭಾಗವು ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ಭಾಗವನ್ನು ಒಳಗೊಂಡಿದ್ದು, 990.51 ಚದರ ಕಿ.ಮೀ. ವಿಸ್ತೀರ್ಣತೆಯನ್ನು ಒಳಗೊಂಡಿರುತ್ತದೆ. ಸದರಿ ರಾಷ್ಟ್ರೀಯ ಉದ್ಯಾನ ಬರಿ ವನ್ಯಜೀವಿಧಾಮ ಮಾತ್ರವಲ್ಲದೆ ಹುಲಿ ಯೋಜನೆಗೆ ಅಳವಡಿಕೆಯಾದ ತಾಣವಾಗಿರುತ್ತದೆ. ಹಾಗೂ ಏಷ್ಯಾದ ಆನೆಗಳಿಗೆ ಮತ್ತು ಹುಲಿ ಸಂತತಿಗೆ ಹೆಸರುವಾಸಿಯಾದ ಅರಣ್ಯವಾಗಿರುತ್ತದೆ. ಈ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ವನ್ಯಜೀವಿಗಳು ಸಿಲುಕಿ ಸಾವಿಗೀಡಾಗಿ ಅವುಗಳ ಸಂತತಿ ಕ್ಷೀಣಿಸುತ್ತಿದೆ. ಹೀಗಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
ಈ ಆದೇಶದಿಂದ ಕೆಳಕಂಡವರಿಗೆ ವಿನಾಯ್ತಿ ನೀಡಲಾಗಿದೆ.
ಸಾರ್ವಜನಿಕರಿಗೆ,ಗ್ರಾಮಸ್ಥರಿಗೆ ಅನುಕೂಲವಾಗುವಂತೆ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ 2 ಬಸ್ಸುಗಳನ್ನು ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಹಾಗೂ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತಹ ಸಂದರ್ಭದಲ್ಲಿ ಅನುಮತಿ ಪಡೆದಂತಹ ವಾಹನ ಮತ್ತು ಅಂಬುಲೆನ್ಸ್ ವಾಹನಗಳಿಗೆ ಮಾತ್ರ ಈ ಭಾಗದಲ್ಲಿ ಸಂಚರಿಸಲು ಅನುಮತಿಸಿದೆ. ಚೆಕ್ಪೋಸ್ಟ್ನಲ್ಲಿ ಇಂತಹ ವಾಹನಗಳನ್ನು ಸಹ ತಪಾಸಣೆ ಮಾಡುವುದು.
(ದಟ್ಸ್ ಕನ್ನಡ ವಾರ್ತೆ)