ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿದ್ದರಾಮಯ್ಯ ಕನಸು ನನಸಾಗುವ ಕಾಲ ಬಂದಿದೆ
ಹೈಕಮಾಂಡ್ ಭರವಸೆಯಂತೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ಸಿದ್ದುರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ಸಂಪ್ರದಾಯದಂತೆ ಶಾಸಕರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಉಸ್ತುವಾರಿ ಗುಲಾಂನಬಿ ಆಜಾದ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಕೊನೆಕ್ಷಣದಲ್ಲಾಗುವ ಬದಲಾವಣೆಗಳನ್ನು ತಳ್ಳಿಹಾಕಿದರೆ ಸಿದ್ದು ಆಸೆ ಭಾನುವಾರ ಕೈಗೂಡಲಿದೆ. ಕಳೆದ ಎರಡು ಮೂರು ವರ್ಷಗಳಿಂದ ಸಿದ್ದರಾಮಯ್ಯ ಅನೇಕ ಕಸರತ್ತುಗಳನ್ನು ಮಾಡಿ ವಿಫಲರಾಗಿದ್ದರು. ಈಗ ಹೈಕಮಾಂಡ್ ನೀಡಿದ ಭರವಸೆಯನ್ನು ಈಡೇರಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಿದ್ದು ಬೆಂಬಲಿಗರಲ್ಲಿ ಕುತೂಹಲ ಮನೆಮಾಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, June 6, 2009, 17:42 [IST]