15ನೇ ಲೋಕಸಭೆಯ ಚೊಚ್ಚಲ ಅಧಿವೇಶನಕ್ಕೆ ಸಜ್ಜು
ಯುಪಿಎ ಸರಕಾರದ ಕಾರ್ಯಕ್ರಮಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ. ಹಾಗೆಯೇ ರಾಷ್ಟ್ರಪತಿಗಳ ಭಾಷಣ, ಲೋಕಸಭಾಧ್ಯಕ್ಷರ ಆಯ್ಕೆ ಪ್ರಮುಖ ಅಂಶಗಳು. ಹಿರಿಯ ಲೋಕಸಭಾ ಸದಸ್ಯ ಮಾಣಿಕ್ ರಾವ್ ಗವಿಟ್(75) ಅವರನ್ನು ರಾಷ್ಟ್ರಪತಿ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ. ಮಹಾರಾಷ್ಟ್ರದ ನಂದೂರ್ ಬಾರ್ ಕ್ಷೇತ್ರದಿಂದ 9ನೇ ಬಾರಿಗೆ ಆಯ್ಕೆಯಾಗಿರುವ ಗವಿಟ್ ಸಂಸದರಾಗಿ 27 ವರ್ಷಗಳ ಅನುಭವಿ.
ಅಧಿವೇಶನದ ಮೊದಲ ಎರಡು ದಿನ ಹೊಸದಾಗಿ ಆಯ್ಕೆಯಾಗಿರುವ 543 ಸಂಸದರು ಪ್ರಮಾಣ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಬೋಧಿಸಲು ರಾಷ್ಟ್ರಪತಿ, ನಾಲ್ಕು ಹಿರಿಯ ಸದಸ್ಯರದಾದ ಬಸುದೇವ್ ಆಚಾರಿಯಾ (ಸಿಪಿಎಂ), ಅರ್ಜುನ್ ಸಿಂಗ್ ಚರಣ್ ಸೇಥಿ (ಬಿಜೆಡಿ), ಬಿರೆನ್ ಸಿಂಗ್ ಎಂಗ್ಟಿ (ಕಾಂಗ್ರೆಸ್) ಹಾಗೂ ಸುಮಿತ್ರಾ ಮಹಾಜನ್ (ಬಿಜೆಪಿ) ಅವರ ಸಮಿತಿ ರಚಿಸಿದ್ದಾರೆ.
ಜೂ.3 ರಂದು ಹೊಸ ಸ್ಪೀಕರ್ ಆಯ್ಕೆ ನಡೆಯಲಿದೆ.ಜೂ.4ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೂ.9ರಂದು ಮೊದಲ ಅಧಿವೇಶನ ಅಂತ್ಯವಾಗಲಿದೆ. ಜೂನ್ ಅಂತ್ಯದಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು ನೂತನ ಸರಕಾರ2009-10ನೇ ಸಾಲಿನ ಬಜೆಟನ್ನು ಮಂಡಿಸಲಿದೆ.
(ಏಜೆನ್ಸೀಸ್)