ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ
ಹೈದರಾಬಾದ್, ಮೇ. 28 : ಆಸ್ಟ್ರೇಲಿಯಾ ಪಡ್ಡೆ ಹುಡುಗರಿಂದ ಜನಾಂಗೀಯ ಹಲ್ಲೆಗೆ ಒಳಗಾದ ಹೈದರಾಬಾದ್ ಮೂಲಕ ವಿದ್ಯಾರ್ಥಿ ಶ್ರವಣ್ ಕುಮಾರ್ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಆಂಧ್ರಪ್ರದೇಶ ಮೂಲದ ಆಸ್ಟ್ರೇಲಿಯಾದಲ್ಲಿರುವ ನಾಲ್ಕು ವಿದ್ಯಾರ್ಥಿಗಳ ಮೇಲೆ ಮಂಗಳವಾರ ಅಲ್ಲಿನ ಪಡ್ಡೆ ಹುಡುಗರಿಂದ ಹಲ್ಲೆ ನಡೆದಿತ್ತು. ಅಲ್ಲದೇ, ಹಲ್ಲೆಗೊಳಗಾದ ವಿದ್ಯಾರ್ಥಿಗಳ ಮನೆಗಳನ್ನು ಲೂಟಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸ್ಕ್ರೂ ಡ್ರೈವರ್ ಮೂಲಕ ಶ್ರವಣ್ ಕುಮಾರ್ ಆಸ್ಟ್ರೇಲಿಯಾ ಹುಡುಗರ ತಂಡ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಕಳೆದೆರಡು ದಿನಗಳಿಂದ ತುರ್ತುನಿಗಾ ಘಟಕದಲ್ಲಿರುವ ಶ್ರವಣ್ ಕುಮಾರ್ ಆರೋಗ್ಯ ಬಗ್ಗೆ ವೈದ್ಯರು ಸ್ಪಷ್ಟವಾಗಿ ಹೇಳುತ್ತಿಲ್ಲ. ಶ್ರವಣ್ ಕುಮಾರ್ ಜೊತೆಗೆ ಕಿರಣ್, ಸಂದೀಪ್ ಮತ್ತು ಸುಭಾಷ್ ಎಂಬು ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದಿದೆ. ಆದರೆ, ಈ ಮೂವರು ಉಪಾಯದಿಂದ ಹಲ್ಲೆಕೋರರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.
ಆಗ ಸಿಕ್ಕ ಶ್ರವಣ್ ಕುಮಾರ್ ನನ್ನು ಜನಾಂಗೀಯವಾಗಿ ನಿಂದಿಸಿದ್ದಲೇ ಮನಬಂದಂತೆ ಥಳಿಸಿದ್ದಾರೆ. ಈ ಕೂಡಲೇ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಿಂದ ಹೊರಹೋಗಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಘಟನೆ ಸರಕಾರವನ್ನು ಒತ್ತಾಯಿಸಿದೆ.
(ಏಜನ್ಸೀಸ್)