ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೂನ್ 1 ರಿಂದ ನೂತನ ಪೊಲೀಸ್ ನಿಯಮ, ಬಿದರಿ
ಗೆಜೆಟ್ ನಲ್ಲಿ ಪ್ರಕಟಗೊಂಡ ನಂತರ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 20 ಆಕ್ಷೇಪಣೆಗಳು ಬಂದಿದ್ದು, ಈಗಾಗಲೇ ಅವುಗಳಿಗೆ ಸೂಕ್ತ ವಿವರಣೆ ನೀಡಲಾಗಿದೆ. ಎರಡು ಬದಲಾವಣೆಗಳನ್ನು ತಂದು ನೂತನ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು. ಈ ಹಿಂದೆ ನಿಯಮ ರೂಪಿಸಿದಾಗ ಪರವಾನಿಗೆ ಪಡೆಯುವ ಅರ್ಜಿಗೆ 100 ರುಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು. ಇದೀಗ ಈ ಮೊತ್ತವನ್ನು 20 ರುಪಾಯಿ ತಗ್ಗಿಸಲಾಗಿದೆ ಎಂದರು.
ಸಣ್ಣಪುಟ್ಟ ಸಮಾರಂಭಗಳಾದರೆ ಆಯಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳೇ ಪರವಾನಿಗೆ ನೀಡಬಹುದು. ಒಂದಕ್ಕಿಂತ ಹೆಚ್ಚು ಠಾಣೆಗೆ ಪ್ರತಿಭಟನೆ ಅಥವಾ ಸಮಾರಂಭ ನಡೆಯುವ ಸ್ಥಳ ಬರುವುದಾದರೆ ಆಯಾ ಎಸಿಪಿಯಿಂದ ಪರವಾನಿಗೆ ಪಡೆಯಬೇಕು. ಒಂದು ವೇಳೆ ಬೃಹತ್ ಸಮಾವೇಶ ಅಥವಾ ಪ್ರತಿಭಟನೆಗಳನ್ನು ನಡೆಸಬೇಕಾದರೆ ಆಯಾ ವಿಭಾಗದ ಡಿಸಿಪಿಯಿಂದ ಪರವಾನಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ನಿಯಮವನ್ನು ಬೆಂಗಳೂರಿಗೂ ಅಳವಡಿಸಲಾಗುತ್ತಿದೆ ಎಂದು ಬಿದರಿ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Story first published: Wednesday, May 27, 2009, 17:30 [IST]