ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧಿಕಾರದಿಂದ ದೂರವಿಡಲು ಯತ್ನ

By Staff
|
Google Oneindia Kannada News

ನವದೆಹಲಿ, ಮೇ. 14 : ಕೋಮುವಾದಿ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷಕ್ಕೆ ದೆಹಲಿ ಗದ್ದುಗೆ ಏರಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಲೋಕಜನಶಕ್ತಿ ಮುಖಂಡ ಹಾಗೂ ಚತುರ್ಥ ರಂಗದ ಪ್ರಮುಖ ರಾಂವಿಲಾಸ್ ಪಾಸ್ವಾನ ಸ್ಪಷ್ಟಪಡಿಸಿದ್ದಾರೆ.

ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ ಡಿಎವನ್ನು ಅಧಿಕಾರದಿಂದ ದೂರವಿಡುವುದೇ ಚತುರ್ಥರಂಗದ ಏಕೈಕ ಉದ್ದೇಶ ಎಂದರು. ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ಲೋಕಜನ ಶಕ್ತಿ ಪಕ್ಷಗಳು ಈಗಾಗಲೇ ಯುಪಿಎ ಸರಕಾರದಲ್ಲಿವೆ. ಪಲಿತಾಂಶದ ನಂತರ ಚುತುರ್ಥ ರಂಗದ ನಾಯಕರಾದ ಲಾಲು ಪ್ರಸಾದ ಯಾದವ್, ಮುಲಾಯಂ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಪಾಸ್ವಾನ ಹೇಳಿದರು.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಯತ್ನಿಸುತ್ತಿದ್ದಾರೆ ಎನ್ನುವುದನ್ನು ತಳ್ಳಿಹಾಕಿದ ಪಾಸ್ವಾನ್ , ಅದಕ್ಕೆ ಹೆಚ್ಚಿನ ಮಹತ್ವವೇನೂ ಇಲ್ಲ ಎಂದಷ್ಟೆ ಹೇಳಿದರು.

(ಏಜನ್ಸೀಸ್)

ಜೂಜಿನಲ್ಲಿ ಪ್ರಧಾನಮಂತ್ರಿ : ಸಿಂಗ್ ಗೆ ಒಲವು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X