ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ

By Staff
|
Google Oneindia Kannada News

ರಾಮಪುರ್ (ಉ.ಪ್ರ), ಮೇ. 12 : ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾ ಅವರು ತಂಗಿದ್ದ ಹೋಟೆಲ್ ಕೊಠಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯ ಪ್ರೇರಿತ ಮತ್ತು ಜಯಪ್ರದಾ ಅವರ ಮೇಲೆ ಮತ್ತೊಂದು ಅಪವಾದ ಹೊರೆಸುವ ತಂತ್ರ ಎಂದು ಹೇಳಲಾಗಿದೆ.

ಇಂದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಕ್ಷೇತ್ರದಲ್ಲಿ ನನ್ನ ಹೆಸರಿಗೆ ಚ್ಯುತಿ ತರಲು ಈ ಕೆಲಸ ನಡೆದಿದೆ. ಇದು ಅಜಂ ಖಾನ್ ಅವರ ರಾಜಕೀಯ ಪ್ರೇರಿತ ದ್ವೇಷದ ರಾಜಕಾರಣ. ಚುನಾವಣೆಗೆ ಮುಂಚೆ ಈ ಕ್ಷೇತ್ರದಿಂದ ನೀವೇ ಸ್ಪರ್ಧಿಸಿ ಎಂದು ಖಾನ್ ಅವರನ್ನು ಕೇಳಿದ್ದೆ. ನಿಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತೇನೆ ಎಂದು ಅವರಿಗೆ ಹೇಳಿದ್ದೆ. ಅವರು ಸ್ಪರ್ಧಿಸಲು ಆಸಕ್ತಿ ತೋರದೇ ಇದ್ದಿದ್ದರಿಂದ ನಾನು ಈ ಕ್ಷೇತ್ರದಿಂದ ಸ್ಪರ್ಧಿಸಿದೆ ಎಂದು ಜಯಪ್ರದಾ ಅಜಂ ಖಾನ್ ಮೇಲೆ ಹರಿಹಾಯ್ದಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಮತ್ತು ಮತ್ತೊಬ್ಬ ಪಕ್ಷದ ಪ್ರಭಾವಿ ಮುಸ್ಲಿಂ ನಾಯಕ ಅಜಂ ಖಾನ್ ನಡುವಿನ ಪ್ರತಿಷ್ಠೆ ಕಣವಾಗಿರುವ ಈ ಕ್ಷೇತ್ರದಲ್ಲಿ ಜಯಪ್ರದಾ ಅವರನ್ನು ಸೋಲಿಸಬೇಕೆಂದು ಅಜಂ ಖಾನ್ ಶತಾಯು ಗತಾಯು ಪ್ರಯತ್ನ ನಡೆಸುತ್ತಿದ್ದಾರೆಂದು ಎಸ್ಪಿ ಕಾರ್ಯಕರ್ತರ ಅನಿಸಿಕೆ. ತನ್ನ ನಗ್ನ ಚಿತ್ರಗಳನ್ನು ಹೊಂದಿರುವ ಸಿಡಿಯನ್ನು ಅಜಮ್ ಖಾನ್ ಬಿಡುಗಡೆ ಮಾಡಿದ್ದಾರೆ ಎಂದು ಜಯಪ್ರದಾ ಸೋಮವಾರ ಆರೋಪಿಸಿದ್ದರು.

(ಏಜೆನ್ಸೀಸ್)

ಪೂರಕ ಓದಿಗೆ:
ಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ
ಜಯಪ್ರದಾ ನಗ್ನ ಸಿಡಿ ಪ್ರಕರಣ
ಸಮಾಜವಾದಿ ಕುಟುಂಬದಲ್ಲಿ ಒಡಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X