ರ್ಯಾಗಿಂಗ್ ತಡೆಯಲು ಸುಪ್ರಿಂಕೋರ್ಟ್ ಆದೇಶ
ನವದೆಹಲಿ, ಮೇ. 8 : ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಕಾನೂನು ರೂಪಿಸಿದರೂ ರ್ಯಾಗಿಂಗ್ ಪಿಡುಗನ್ನು ತಡೆಯಲು ಅಸಾದ್ಯವಾಗಿರುವ ಬೆನ್ನಲ್ಲೇ ಇಂದು ಸುಪ್ರಿಂಕೋರ್ಟ್ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದ್ದು, ರ್ಯಾಗಿಂಗ್ ಭೂತ ತಡೆಗಟ್ಟಲು ವಿಶೇಷ ಸಮಿತಿ ರಚಿಸಿ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ಸುಪ್ರಿಂಕೋರ್ಟ್ ನ್ಯಾಯಾಮೂರ್ತಿ ಆರಿಜಿತ್ ಪಸಾಯತ್ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದ್ದು, ದೇಶಾದ್ಯಂತ ರ್ಯಾಗಿಂಗ್ ಪಿಡುಗು ಮಿತಿಮೀರಿದೆ. ಇದನ್ನು ನಿರ್ಮೂಲನೆಗೆ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಮನೋವೈದ್ಯರನ್ನು ನೇಮಿಸಬೇಕು ಎಂದು ತಾಕೀತು ಮಾಡಿದೆ.
ದೇಶದ ಎಲ್ಲ ರಾಜ್ಯಗಳು ಅಪೆಕ್ಸ್ ಕೋರ್ಟಿನ ಅದೇಶ ಪಾಲಿಸಬೇಕು ಹಾಗೂ ಹೆಚ್ಚಾಗಿರುವ ರ್ಯಾಗಿಂಗ್ ಪಿಡುಗು ತಡೆಗಟ್ಟುವುದಕ್ಕೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಬೇಕು ಎಂದು ಸೂಚಿಸಿದೆ. ಇತ್ತೀಚೆಗೆ ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಮನ್ ಖುಚ್ರೋ ಎಂಬ ವಿದ್ಯಾರ್ಥಿ ರ್ಯಾಗಿಂಗ್ ಪಿಡುಗಿನಿಂದ ಮೃತಪಟ್ಟಿದ್ದ. ಇದು ದೇಶಾದ್ಯಂತ ವ್ಯಾಪಕ ಖಂಡನೆ ಹಾಗೂ ಟೀಕಿಗೆ ಗುರಿಯಾಗಿತ್ತು.
(ಏಜೆನ್ಸೀಸ್)
ರ್ಯಾಗಿಂಗ್,
ಆಂಧ್ರ
ವಿದ್ಯಾರ್ಥಿನಿ
ಆತ್ಮಹತ್ಯೆಗೆ
ಯತ್ನ
ರ್ಯಾಗ್
ಮಾಡುವವರಿಗೆ
ಯಾವ
ಶಿಕ್ಷೆ
ನೀಡಬೇಕು?
ಗುರುಗಾಂವ್,
ಸಹಪಾಠಿಗಳಿಂದ
ವಿದ್ಯಾರ್ಥಿಗೆ
ಥಳಿತ