ವಿಮಾನ ನಿಲ್ದಾಣದಲ್ಲಿ ಹಂದಿಜ್ವರ ವರದಿಯಾಗಿಲ್ಲ
ಮಂಗಳೂರು, ಮೇ. 8 : ಈ ಕ್ಷಣದವರೆಗೆ ಭಾರತದ ಯಾವ ವಿಮಾನ ನಿಲ್ದಾಣದಲ್ಲಿಯೂ ಹಂದಿಜ್ವರ ಇರುವ ಬಗ್ಗೆ ವರದಿಯಾಗಿಲ್ಲ ಎಂದು ಭಾರತೀಯ ವೈಮಾನಿಕ ಇಲಾಖೆ ಚೇರ್ ಮನ್ ವಿ ಪಿ ಅಗರ್ ವಾಲ್ ತಿಳಿಸಿದರು. ನಗರದ ಬೈಜ್ಪೆ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುತ್ತಿರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಇದಕ್ಕಾಗಿ ದೇಶದ ಪ್ರತಿ ವಿಮಾನ ನಿಲ್ದಾಣದಲ್ಲಿ ಕೂಡಾ ತಜ್ಞ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ ಇಲ್ಲಿಯವರೆಗೂ ಹಂದಿಜ್ವರ ಭಾರತದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿಲ್ಲ. ಶಂಕಾಸ್ಪದ ಪ್ರಯಾಣಿಕರನ್ನು ಕೂಡಲೇ ತಪಾಸಣೆ ಒಳಪಡಿಸಲಾಗಿದ್ದು, ಹಿಂದಿಜ್ವರ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಮೈಸೂರಿನಲ್ಲಿ ನಾನ್ ಮೆಟ್ರೋ ವಿಮಾನ ನಿಲ್ದಾಣದ ಕಾಮಗಾರಿ ಇದೇ ಜುಲೈ ತಿಂಗಳಲ್ಲಿ ಕೊನೆಗೊಳ್ಳಲಿವೆ ಎಂದು ಅಗರ್ ವಾಲ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಬಿಐಎಲ್ ನಲ್ಲಿ ಹಂದಿಜ್ವರ ಸೋಂಕಿತರು ಪತ್ತೆ