ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಐಟಿ ಮಂದಿಗೆ ಧೈರ್ಯ ತುಂಬಿದ ಸಿಎಂ
ಬೆಂಗಳೂರು, ಮೇ. 7 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮಿಗಳ ಆತಂಕ ದೂರ ಮಾಡಲು ರಾಜ್ಯ ಸರಕಾರ ಶೀಘ್ರದಲ್ಲೇ ಉದ್ಯಮದ ಪ್ರಮುಖರೊಂದಿಗೆ ಸಭೆ ನಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಹೊರಗುತ್ತಿಗೆ ಸಂಬಂಧಿದಂತೆ ಅಮೆರಿಕ ಅಧ್ಯಕ್ಷರ ಮಾತಿಗೆ ಐಟಿ ಉದ್ಯಮ ಭಯಪಡುವ ಅಗತ್ಯವಿಲ್ಲ. ಉದ್ಯಮದ ಬೆನ್ನಿಗೆ ಸರಕಾರ ನಿಂತಿದೆ ಎಂದರು. ಮಾಹಿತಿ ತಂತ್ರಜ್ಞಾನದ ಪ್ರಗತಿ ಮುಂದುವರೆಯಬೇಕು. ಅದಕ್ಕಾಗಿ ಎಲ್ಲ ರೀತಿಯ ಸಹಕಾರವನ್ನು ಸರಕಾರ ನೀಡಲಿದೆ. ಒಬಾಮ ಅವರ ಹೇಳಿಕೆ ಹಿನ್ನೆಲೆಯಲ್ಲಿ ಉದ್ಯಮಕ್ಕೆ ಹಿನ್ನೆಡೆ ಆಗದಂತೆ ವಿಶೇಷವಾಗಿ, ಬಿಪಿಒ ಕಂಪನಿಗಳಿಗೆ ಅವಲಂಬಿತರಿಗೆ ಉದ್ಯೋಗ ಭದ್ರತೆ ವಿಚಾರದಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಹೊರಗುತ್ತಿಗೆಗೆ ತೆರಿಗೆ ವಿನಾಯಿತಿ ಇಲ್ಲ : ಒಬಾಮಾ
Comments
ಬೆಂಗಳೂರು ಅಮೆರಿಕ ಯಡಿಯೂರಪ್ಪ america global economic crisis bpo ಜಾಗತಿಕ ಆರ್ಥಿಕ ಬಿಕ್ಕಟ್ಟು barack obama ಐಟಿ ಉದ್ಯಮ it industry ಬರಾಕ್ ಒಬಾಮ ಹೊರಗುತ್ತಿಗೆ outsourcing
Story first published: Thursday, May 7, 2009, 11:35 [IST]