ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ ಹಾಕಲು ಜರ್ನೈಲ್ ಸಿಂಗ್ ನಿರಾಕರಣೆ

By Staff
|
Google Oneindia Kannada News

Jarnail Singh
ನವದೆಹಲಿ, ಮೇ. 7 : ಹಿಂದೂ ಜಾಗರಣ್ ಪತ್ರಿಕೆಯ ಹಿರಿಯ ವರದಿಗಾರ ಜರ್ನೈಲ್ ಸಿಂಗ್ ಗೊತ್ತಲ್ಲ. ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಅವರಿಗೆ ಬೂಟು ಎಸೆದ ಹೆಸರು ಮಾಡಿದ್ದ ಪತ್ರಕರ್ತ ಜರ್ನೈಲ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸದಿರಲು ನಿರ್ಧರಿಸಿರುವ ಅವರು, ಜಾತಿ, ಮತ, ಧರ್ಮ ಹಾಗೂ ವಲಯ ಆಧಾರದ ಮೇಲೆ ಇಂದಿನ ನಾಯಕರು ಹಾಗೂ ರಾಜಕೀಯ ಪಕ್ಷಗಳು ಮತ ಗಿಟ್ಟಿಸತೊಡಗಿವೆ. ಇದರಿಂದ ದೇಶದಲ್ಲಿ ಅಶಾಂತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಹಕ್ಕು ಚಲಾಯಿಸಲು ಮನಸ್ಸಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾನು ಯಾರಿಗೂ ಮತ ಹಾಕಲ್ಲ. ಯಾರಿಗೆ ಹಾಕಿದರೂ ಅದರಿಂದ ಪ್ರಯೋಜನವಿಲ್ಲ. ಕಣದಲ್ಲಿರುವ ಅಭ್ಯರ್ಥಿಗಳಿಂದ ದೇಶಕ್ಕೆ ಗಂಡಾಂತರವಿದೆ ಹೊರತು ಒಳಿತಂತೂ ಖಂಡಿತ ಇಲ್ಲ ಎಂದು ಜರ್ನೈಲ್ ಸಿಂಗ್ ಹೇಳಿದ್ದಾರೆ. ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಹಾಗೂ ಸಜ್ಜನಕುಮಾರ್ ಅವರಿಗೆ ಕ್ಲಿನ್ ಚಿಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡ ಸಿಂಗ್, ಇತ್ತೀಚೆಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಿ ಚಿದಂಬರಂ ಅವರ ಬೂಟು ಎಸೆದು ಜರ್ನೈಲ್ ಸಿಂಗ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

(ಏಜೆನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
ಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X