ಲಂಡನ್ ಸ್ಕೂಲ್ ನಲ್ಲಿ ವರುಣ್ ವಿರುದ್ಧ ಅಸಮಾಧಾನ
ವರುಣ್ ಗಾಂಧಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದು ನಮಗೆ ಇಷ್ಟವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಯಾರಿಗೂ ಕೂಡಾ ನೋವನ್ನುಂಟು ಮಾಡದ ವರುಣ್, ರಾಜಕೀಯ ಸೇರಿದ ಮೇಲೆ ಸಂಪೂರ್ಣ ಬದಲಾಗಿರುವುದು ಅಸಮಾಧಾನದ ಸಂಗತಿಯಾಗಿದೆ. ಅಲ್ಲದೇ ನಮ್ಮ ವಿದ್ಯಾರ್ಥಿಗಳು ಲಂಡನ್ ಸ್ಕೂಲ್ ನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅದನ್ನು ಮೀರಿ ವರುಣ್ ಗಾಂಧಿ ಲಂಡನ್ ಸ್ಕೂಲ್ ನ ಹೆಸರನ್ನು ಹೇಳಿದರೆ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ. ಲಂಡನ್ ಸ್ಕೂಲ್ ನಲ್ಲಿ ವರುಣ್ ಗಾಂಧಿ ಪದವಿ ಮುಗಿಸಿದ್ದು, ಎಂಎಸ್ಸಿ ಪ್ರವೇಶ ಪಡೆದು ನಂತರ ಅರ್ಧಕ್ಕೆ ಕೈಬಿಟ್ಟಿದ್ದಾರೆ.
ಪಿಲಿಭಿತ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ವರುಣ್ ಗಾಂಧಿ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ವರುಣ್ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿತ್ತಲ್ಲದೇ, ಮಾಯಾವತಿ ನೇತೃತ್ವದ ಉತ್ತರ ಪ್ರದೇಶ ಸರಕಾರ ವರುಣ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. ಇದರಿಂದ ವರುಣ್ ಸುಮಾರು 20 ದಿನಗಳ ಸೆರೆವಾಸ ಅನುಭವಿಸಬೇಕಾಯಿತು. ನಂತರ ಸುಪ್ರಿಂಕೋರ್ಟ್ ಮಧ್ಯ ಪ್ರವೇಶದಿಂದ ವರುಣ್ ಗೆ ಪೆರೋಲ್ ಮೂಲಕ ಬಿಡುಗಡೆ ಭಾಗ್ಯ ದೊರೆತಿತ್ತು.
(ಏಜನ್ಸೀಸ್)
ವರುಣ್
ಗಾಂಧಿಗೆ
ಪೆರೋಲ್
ವಿಸ್ತರಣೆ