ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಚೋದನಕಾರಿ ಭಾಷಣ ಸಿ.ಟಿ. ರವಿಗೆ ನೋಟೀಸ್
ಬೆಂಗಳೂರು, ಏ.30: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ ಟಿ ರವಿ ಅವರಿಗೆ ಚುನಾವಣಾ ಆಯೋಗ ನೋಟೀಸ್ ಜಾರಿಗೊಳಿಸಿದೆ.
ಏಪ್ರಿಲ್ 6 ರಂದು ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಮತ ವಿಭಜನೆ ಕುರಿತು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರವಿ ಅವರಿಗೆ ಬುಧವಾರ ನೋಟೀಸ್ ನೀಡಲಾಗಿದ್ದು 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಸಿ.ಟಿ. ರವಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಐ.ಪಿ.ಸಿ. 152 ಎ, 153ಬಿ, 505 ಹಾಗೂ ಚುನಾವಣಾ ನೀತಿ ಸಂಹಿತೆಯ 1 ಮತ್ತು 3 ರ ಸಬ್ ಕ್ಲಾಸ್ 1.1, 1.3 ಅಡಿಯಲ್ಲಿ ನೋಟೀಸ್ ಜಾರಿ ಮಾಡಿದೆ.
ಏತನ್ಮಧ್ಯೆ, ನೀತಿ ಸಂಹಿತೆ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಬಿ.ಜಿ.ನಂದಕುಮಾರ್ ವಿರುದ್ಧ ಚಿಕ್ಕಮಗಳೂರು ಚುನಾವಣಾ ವೀಕ್ಷಕರು ಪ್ರತ್ಯೇಕ ವರದಿಯನ್ನು ಕೇಂದ್ರ ಆಯೋಗಕ್ಕೆ ರವಾನಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
Comments
ಚುನಾವಣಾ ಆಯೋಗ kannada ಕನ್ನಡ ಸಕಲೇಶಪುರ sakleshpur lok sabha election 2009 ಹಾಸನ hassan hate speech ಸಿ ಟಿ ರವಿ c t ravi notice ಲೋಕಸಭೆ ಚುನಾವಣೆ 2009
Story first published: Thursday, April 30, 2009, 11:33 [IST]