ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಿ: ಕೋರ್ಟ್
ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಂಬಂಧ ಮೂರು ತಿಂಗಳಲೊಳಗೆ ಸಂಪೂರ್ಣ ವರದಿ ನೀಡುವಂತೆ ರಾಘವನ್ ಸಮಿತಿಗೆ ಆದೇಶ ನೀಡಿದೆ. ಅಲ್ಲದೇ ಮೋದಿ ಸರಕಾರದಲ್ಲಿರುವ ಕ್ಯಾಬಿನೆಟ್ ಸಚಿವರ, ಮೂರು ಶಾಸಕರು, ಮೂರು ಮಂದಿ ವಿಶ್ವ ಹಿಂದೂ ಪರಷತ್ ಕಾರ್ಯಕರ್ತರು ಮತ್ತು ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸುವ೦ತೆ ಆದೇಶ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜ ಸೇವಕಿ ತೀಸ್ತಾ ಸೆಟತ್ವಾಡ್, ಇದು ನಮಗೆ ಆರಂಭಿಕ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಏಳು ವರ್ಷಗಳ ನಂತರ ಮತ್ತೆ ವಿಚಾರಣೆ ನಡೆಸಲು ಮಾನ್ಯ ನ್ಯಾಯಾಲಯ ಅದೇಶ ನೀಡುವ ಮೂಲಕ ಮಾನವ ಹಕ್ಕುಗಳನ್ನು ಎತ್ತಿಹಿಡಿದಿದೆ. ಇದು ಗೋಧ್ರಾ ಹತ್ಯಾಕಾಂಡದಲ್ಲಿ ಮಡಿದವರಿಗೆ ಸದ್ಯದ ಜಯ ಎಂದು ಖಂಡಿತವಾಗಿ ಹೇಳಬಹುದು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಗುಜರಾತ ಭೇಟಿ ನೀಡಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಗುಜರಾತ ಐತಿಹಾಸಿಕವಾಗಿ ಭವ್ಯ ಇತಿಹಾಸವನ್ನು ಹೊಂದಿದೆ. ಆದರೆ, ಇಂದು ಕೋಮು ಶಕ್ತಿಗಳ ಕಪಿ ಮುಷ್ಠಿಯಲ್ಲಿ ನಲುಗತೊಡಗಿರುವುದು ದುರಂತ ಎಂದು ಟೀಕಿಸಿದ್ದರು. ಎನ್ ಡಿಎ ದೇಶ ವಿಭಜನೆಯಲ್ಲಿ ತೊಡಗಿದೆ. ಈ ಕಾರಣಕ್ಕಾಗಿ ಆ ಪಕ್ಷಕ್ಕೆ ಮತ ನೀಡಬೇಡಿ ಎಂದು ಪ್ರಧಾನಿ ಮತದಾರಲ್ಲಿ ಮನವಿ ಮಾಡಿಕೊಂಡಿದ್ದರು. 2002ರಲ್ಲಿ ಗೋಧ್ರಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರನ್ನು ಸಜೀವ ದಹನ ಮಾಡಲಾಗಿತ್ತು. ಆನಂತರ ಗುಜರಾತನಲ್ಲಿ ಭೀಕರ ಗಲಭೆಗಳು ಉಂಟಾದವು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದವು. ಆ ಘಟನೆಯಲ್ಲಿ ಮೋದಿ ಸರಕಾರದ ಕೈವಾಡವಿರುವ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
(ಏಜೆನ್ಸೀಸ್)