ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ : ಸೇನಾ ಕಾರ್ಯಾಚರಣೆ ಅಂತ್ಯ

By Staff
|
Google Oneindia Kannada News

ಕೊಲಂಬೊ, ಏ. 27 : ಕಳೆದ ಒಂದು ವಾರದಿಂದ ಎಲ್ ಟಿಟಿಇ ವಿರುದ್ಧ ಶ್ರೀಲಂಕಾ ಸರಕಾರ ಆರಂಭಿಸಿದ್ದ ಸೇನಾ ಕಾರ್ಯಾಚರಣೆಯನ್ನು ಇಂದು ಕೊನೆಗೊಳಿಸಲಾಗಿದೆ ಎಂದು ಶ್ರೀಲಂಕಾ ಸರಕಾರ ಹೇಳಿದೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತಿಗೆ ಮಣಿದು ಅನಿರ್ದಿಷ್ಟಾವಧಿವರೆಗೆ ಹಮ್ಮಿಕೊಂಡಿದ್ದ ಉಪವಾಸವನ್ನು ಸತ್ಯಾಗ್ರಹ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಕೈಬಿಟ್ಟಿದ್ದಾರೆ.

ಎಲ್ ಟಿಟಿಇ ವಶದಲ್ಲಿರುವ ಬಹುತೇಕ ಪ್ರದೇಶದ ಶ್ರೀಲಂಕಾ ಸೇನೆ ನಡೆಸಿದ ಸೇನಾ ಕಾರ್ಯಾಚರಣೆ ಅಂತಿಮಗೊಂಡಿದೆ. ಅಲ್ಲದೇ ಎಲ್ ಟಿಟಿಇ ವಶದಲ್ಲಿದ್ದ ಪ್ರದೇಶಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಅಮಾಯಕ ನಾಗರಿಕರ ರಕ್ಷಣೆಯ ದೃಷ್ಟಿಯಿಂದ ಕದನಕ್ಕೆ ವಿರಾಮ ಘೋಷಿಸಲಾಗಿದೆ ಎಂದು ಶ್ರೀಲಂಕಾ ಸರಕಾರ ಸ್ಪಷ್ಟಪಡಿಸಿದೆ. ಸೇನಾ ಕಾರ್ಯಾಚರಣೆಯಲ್ಲಿ ಅತಂತ್ರರಾಗಿರುವ ನಾಗರಿಕರಿಗೆ ಸರಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರುಣಾನಿಧಿ ಉಪವಾಸ ಅಂತ್ಯ
ತಮಿಳರ ಮೇಲೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ವಿರೋಧಿಸಿ ತಮಿಳನಾಡು ಮುಖ್ಯಮಂತ್ರಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಮಾಡಿಕೊಂಡ ಮನವಿ ಮಣಿದ ಕರುಣಾನಿಧಿ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಕೇಂದ್ರ ಸರಕಾರ ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆ ಮುಂದಾಗಲಿದೆ. ಅಲ್ಲಿನ ಸರಕಾರಕ್ಕೆ ಸೇನಾ ಕಾರ್ಯಾಚರಣೆ ಕೈಬಿಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸೋನಿಯಾ ಗಾಂಧಿ ಭರವಸೆ ನೀಡಿದ ನಂತರ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಗಿದೆ ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.

(ಏಜನ್ಸೀಸ್)

ತಮಿಳರ ಮೇಲೆ ದಾಳಿ ಖಂಡಿಸಿ ಕರುಣಾನಿಧಿ ಉಪವಾಸ
ಸತ್ಯಾಗ್ರಹ ಕೈಬಿಡುವಂತೆ ಕರುಣಾಗೆ ಪಿಎಂ ಮನವಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X