ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಲೋಕಸಭೆ ಕ್ಷೇತ್ರದ ಪರಿಚಯ

By Staff
|
Google Oneindia Kannada News

ಬೆ೦ಗಳೂರು, ಏ. 24 : ರಾಜಕಿಯವನ್ನೇ ಉಂಡು ಹೊದೆಯುವ ಸಕ್ಕರೆಯ ಗೂಡು. ಕ್ಷೇತ್ರ ಮರುವಿ೦ಗಡಣೆಯ ಬಳಿಕ ಮಂಡ್ಯದ ರಾಜಕೀಯ ಚಿತ್ರಣದಲ್ಲಿ ಮಹತ್ವದ ಬದಲಾವಣೆಯಾಗಿಲ್ಲ. ರಾಜ್ಯದ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಜನರಿಗೆ ರಾಜಕೀಯವೇ ಅನ್ನ ಆಹಾರ. ಅಸ್ತಿತ್ವದ ಕಳಕೊಂಡ ಹಿಂದಿನ ಕನಕಪುರ ಕ್ಷೇತ್ರದಲ್ಲಿದ್ದ ಮಳವಳ್ಳಿ ಈಗ ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿ. ಕಿರುಗಾವಲು ಕ್ಷೇತ್ರ ಕಳೆದುಕೊಂಡು ಮೈಸೂರು ವ್ಯಾಪ್ತಿಯಲ್ಲಿದ್ದ ಕೆ ಆರ್ ನಗರವನ್ನು ಸೇರಿಸಿಕೊಂಡಿದೆ.

ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದ ಕೇಂದ್ರ ಬಿಂದು. ಪ್ರಮುಖ ಪಕ್ಷಗಳು ಈ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದು ವಾಡಿಕೆ. ಮಾಜಿ ಪ್ರಧಾನಿ ದೇವೇಗೌಡರ ಮಾತು ನಡೆಯುವ ಈ ಜಿಲ್ಲೆಯಲ್ಲಿ ಜನತಾದಳ ಪ್ರಬಲವಾಗಿದೆ. ತಾರಾ ವರ್ಚಸ್ಸಿನಿಂದ ಅಂಬರೀಶ್ ಹ್ಯಾಟ್ರಿಕ್ ಸಾಧಿಸಿದ್ದರು. ಇಲ್ಲಿಂದ ಆಯ್ಕೆಯಾದ ಸಂಸದರು ಎರಡು ಬಾರಿ ಕೇಂದ್ರ ಸಚಿವರಾಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಜನತಾದಳಕ್ಕೆ ಬಿಜೆಪಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಬಹುದು.

ಜೀವನದಿ ಕಾವೇರಿಯ ಕೃಪೆಯಿಂದ ಹಸಿರಿನಿಂದ ಕಂಗೊಳಿಸುವ ಜಿಲ್ಲೆ. ಕಬ್ಬು ಮತ್ತು ಭತ್ತ ಕ್ಷೇತ್ರದ ಪ್ರಮುಖ ಬೆಳೆ. ಬಯಲುಸೀಮೆ ಮಂಡ್ಯದಲ್ಲಿ ಮೇಲುಕೋಟೆ ಮಾತ್ರ ಮಲೆನಾಡಿನಂತಿದೆ. ಕೆಆರ್ಎಸ್, ಬೃಂದಾವನ, ರಂಗನತಿಟ್ಟು, ಮೇಲುಕೋಟೆ, ಶ್ರೀರಂಗ ಪಟ್ಟಣ, ಶಿವನಸಮುದ್ರ, ಮುಂತಾದ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಿಗೆ ಕ್ಷೇತ್ರ ಪ್ರಸಿದ್ದಿ.

ಕ್ಷೇತ್ರದಲ್ಲಿ ಒಟ್ಟು ಆರು ಸಕ್ಕರೆ ಕಾರ್ಖಾನೆಗಳಿವೆ. ತೂಬಿನಕೆರೆ ಮತ್ತು ಸೋಮನಹಳ್ಳಿ ಕೈಗಾರಿಕಾ ಪ್ರದೇಶಗಳು ಅವಸಾನದ ಅಂಚಿನಲ್ಲಿದೆ. ಭತ್ತ ಮತ್ತು ರಾಗಿಗೆ ಉತ್ತಮ ಧಾರಣೆ ಸಿಕ್ಕಿದ್ದರಿಂದ ಆರ್ಥಿಕ ಪರಿಸ್ಥಿತಿಯು ಅಲ್ಲಿ ಚೇತರಿಕೆಯಾಗಿದೆ. ಏಷಿಯಾದ ಮೊದಲ ಜಲ ವಿದ್ಯುತ್ ಕೇಂದ್ರ ಶಿವನಸಮುದ್ರ ಕ್ಷೇತ್ರದಲ್ಲಿದ್ದರೂ ಇಲ್ಲಿ ವಿದ್ಯುತ್ ಸಮಸ್ಯೆ ವಿಪರೀತ.

* ಕ್ಷೇತ್ರ - ಮಂಡ್ಯ

* ಚುನಾವಣೆ ದಿನಾ೦ಕ - ಎಪ್ರಿಲ್ 30

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ನಾಗಮಂಗಲ
* ಕೃಷ್ಣರಾಜ ಪೇಟೆ
* ಕೃಷ್ಣರಾಜನಗರ
* ಮೇಲುಕೋಟೆ
* ಶ್ರೀರಂಗಪಟ್ಟಣ
* ಮಂಡ್ಯ
* ಮದ್ದೂರು
* ಮಳವಳ್ಳಿ

ಅಭ್ಯರ್ಥಿಗಳು

* ಕಾ೦ಗ್ರೆಸ್ - ಅಂಬರೀಷ್
* ಬಿಜೆಪಿ - ಎಲ್ ಆರ್ ಶಿವರಾಮೇಗೌಡ
* ಜನತಾದಳ - ಚೆಲುವರಾಯಸ್ವಾಮಿ

ಒಟ್ಟು ಮತದಾರರು: 14.91 ಲಕ್ಷ
* ಪುರುಷರು 7.54 ಲಕ್ಷ
* ಮಹಿಳೆಯರು 7.38 ಲಕ್ಷ

ಜಾತೀವಾರು ಲೆಕ್ಕಾಚಾರ:

* ಒಕ್ಕಲಿಗರು - 7.20 ಲಕ್ಷ
* ಪರಿಶಿಷ್ಟರು - 2.40 ಲಕ್ಷ
* ವೀರಶೈವರು 1.42 ಲಕ್ಷ
* ಕುರುಬರು - 1.50 ಲಕ್ಷ
* ಮುಸ್ಲಿ೦ - 80 ಸಾವಿರ
* ಬ್ರಾಹ್ಮಣರು - 40 ಸಾವಿರ
* ಕ್ರೈಸ್ತರು - 22 ಸಾವಿರ
* ಇತರರು - 1 ಲಕ್ಷ

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ

* ಮುಕ್ತಿಕಾಣದ ಕಾವೇರಿ ಜಲ ವಿವಾದ
* ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು
* ಬೆಂಗಳೂರು - ಮೈಸೂರು ಜೋಡಿ ರೈಲು ಮಾರ್ಗ
* ನಿಗದಿಯಾಗದ ಕಬ್ಬು ಬೆಂಬಲ ಬೆಲೆ

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X