ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಟಿಟಿಇ ಉನ್ನತ ನಾಯಕರಿಬ್ಬರ ಶರಣಾಗತಿ

By Staff
|
Google Oneindia Kannada News

ಕೊಲಂಬೊ, ಏ. 22 : ಸೇನಾ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಎಲ್‌ಟಿಟಿಇಯ ನಾಯಕರು ಶರಣಾಗತರಾಗಿದ್ದಾರೆ೦ದು ಶ್ರೀಲಂಕಾ ಹೇಳಿಕೊಂಡಿದೆ. ಎಲ್‌ಟಿಟಿಇಯ ಮಾಧ್ಯಮ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಯಾ ಮಾಸ್ಟರ್ ಮತ್ತು ಸಂಘಟನೆಯ ಹಿರಿಯ ಸದಸ್ಯ ಜಾರ್ಜ್ ಸೇನೆಯ ಮುಂದೆ ಶರಣಾಗುವ ಮೂಲಕ ಎಲ್ ಟಿಟಿಇ ಹೋರಾಟ ಅಂತ್ಯಗೊಳ್ಳುವ ಕಾಲ ಸಮೀಪಿಸುತ್ತಿದೆ. ದೇಶದ ಈಶಾನ್ಯ ಭಾಗದಲ್ಲಿರುವ ಸೇನೆಗೆ ಇಬ್ಬರು ಶರಣಾಗಿದ್ದಾರೆ.

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಶರಣಾಗತಿಗೆ ಶ್ರೀಲಂಕಾ ಸರಕಾರ ನೀಡಿದ್ದ ಗಡುವು ಮುಗಿದಿದ್ದರಿಂದ ಸೇನೆ ತೀವ್ರ ದಾಳಿ ಆರಂಭಿಸಿದ್ದು, ವ್ಯಾಘ್ರರ ಹತೋಟಿಯಲ್ಲಿದ್ದ ಇನ್ನಷ್ಟು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ. ಶ್ರೀಲಂಕಾ ಪಡೆಗಳು ಎಲ್‌ಟಿಟಿಇ ಉನ್ನತ ನಾಯಕರು ಅಡಗಿರಬಹುದೆ೦ದು ಶಂಕಿಸಲಾದ ಗುಂಡು ಹಾರಾಟ ನಿಷೇಧ ಪ್ರದೇಶದ ಪೂರ್ವ ತೀರಕ್ಕೆ ನುಗ್ಗಿದ್ದು, ಎಲ್‌ಟಿಟಿಇ ನಿಯಂತ್ರಣದಲ್ಲಿದ್ದ 17 ಕಿಮೀ ಪ್ರದೇಶವನ್ನು ಶ್ರೀಲಂಕಾ ಪಡೆಗಳು ಆಕ್ರಮಿಸಿಕೊಂಡಿವೆ.

ಸೇನೆಯ ದಾಳಿಯಿಂದ 1000 ಕ್ಕೂ ಹೆಚ್ಚು ನಾಗರಿಕರು ಸತ್ತಿದ್ದಾರೆಂದು ಶ್ರೀಲಂಕಾ ಬಂಡುಕೋರರು ಆರೋಪಿಸಿರುವುದನ್ನು ಅಲ್ಲಗೆಳೆದಿರುವ ಸೇನೆ ಸುಮಾರು 52,000 ನಾಗರಿಕರು ತಪ್ಪಿಸಿಕೊಂಡಿದ್ದಾರೆಂದು ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X