ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿಗೆ ಹೋಗಲು ಸಿದ್ಧ : ವರುಣ್ ಗಾಂಧಿ

By Staff
|
Google Oneindia Kannada News

Varun Gandhi
ಪಿಲಿಭಿತ್, ಏ. 22 : ಜೈಲಿಗೆ ಹೋಗಲು ಹೆದರುವುದಿಲ್ಲ. ದೇಶಭಕ್ತರ ಮೇಲೆ ದಾಳಿ ನಡೆದರೆ ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಯುವಮುಖಂಡ ವರುಣ್ ಗಾಂಧಿ ಅವರ ಸ್ಪಷ್ಟ ಹೇಳಿಕೆಯಿದು. ಪಿಲಿಭಿತ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ವರುಣ್ ಗಾಂಧಿ, ಹಿಂಸೆ ಹಾಗೂ ಅಶಾಂತಿ ಸೃಷ್ಟಿಸುವವರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ರೈತರು ಮತ್ತು ಬಡವರ ಪರ ನಾನು ನಿರಂತರವಾಗಿ ಹೋರಾಟ ನಡೆಸುವೆ. ಜೊತೆಗೆ ದೇಶದೊಳಗೆ ಇದ್ದು ದೇಶದ್ರೋಹಿ ಕೃತ್ಯ ಎಸಗುತ್ತಿರುವವರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುತ್ತಿದೆ. ದೇಶದ ಸಮಗ್ರತೆ, ಏಕತೆಗೆ ಹಗಳಿರುಳು ಶ್ರಮಿಸುವುದಾಗಿ ವರುಣ್ ಭರವಸೆ ನೀಡಿದರು. ವರುಣ್ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ತಾಯಿ ಮನೇಕಾ ಗಾಂಧಿ ಜೊತೆಯಲ್ಲಿದ್ದರು. ನಾಮಪತ್ರಕ್ಕೂ ಮುನ್ನ ಬಹಿರಂಗ ಮೆರವಣಿಗೆ ನಡೆಸಲು ಪಿಲಿಭಿತ್ ಜಿಲ್ಲಾಧಿಕಾರಿಗಳು ಅವಕಾಶ ನಿರಾಕರಿಸಿದರು.

ಕಳೆದ ತಿಂಗಳು ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. ವರುಣ್ ಗಾಂಧಿ ಸುಮಾರು 20 ದಿನಗಳ ಕಾಲ ಜೈಲು ಅನುಭವಿಸಿದ್ದು, ಪೆರೋಲ್ ಮೂಲಕ ಬಿಡುಗಡೆಯಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಏಪ್ರಿಲ್ 21 ರಂದು ನಾಮಪತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X