ತಮಿಳರನ್ನು ಉಳಿಸಲು ಕೇಂದ್ರಕ್ಕೆ ಕರುಣಾನಿಧಿ ಒತ್ತಾಯ
ಚೆನ್ನೈ, ಏ. 21 : ಶ್ರೀಲಂಕಾದಲ್ಲಿರುವ ತಮಿಳು ಉಗ್ರರ ಮೇಲೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಕೈಬಿಡುವಂತೆ ಲಂಕಾ ಸರಕಾರದ ಮೇಲೆ ಒತ್ತಡ ಹೇರುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಶರಣಾಗತಿಗೆ ಲಂಕಾ ಸರಕಾರ ನೀಡಿದ್ದ ಗಡುವು ಮುಗಿದಿದ್ದು, ಸೇನಾ ಕಾರ್ಯಾಚರಣೆಗೆ ಲಂಕಾ ಸರ್ಕಾರ ಆದೇಶ ನೀಡಿದೆ.
ಸೇವಾ ಕಾರ್ಯಾಚರಣೆಯನ್ನು ಕೈಬಿಟ್ಟು ಶಾಶ್ವತ ಶಾಂತಿ ಒಪ್ಪಂದಕ್ಕೆ ಬರುವಂತೆ ಕೇಂದ್ರ ಸರಕಾರ ಲಂಕಾ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರುಣಾನಿಧಿ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಟೆಲಿಗ್ರಾಮ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಶೀಘ್ರವೇ ತಮಿಳರ ಮೇಲೆ ನಡೆಯುತ್ತಿರುವ ಕಾರ್ಯಾಚರಣೆ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಕೇಂದ್ರದ ಸರಕಾರದ ಸೂಚನೆ ಲಂಕಾ ಸರಕಾರ ನಿರಾಕರಿಸಿದ್ದೆ ಆದಲ್ಲಿ ಶ್ರೀಲಂಕಾದೊಂದಿಗಿನ ಎಲ್ಲ ರಾಜತಾಂತ್ರಿಕ ವ್ಯವಹಾರಗಳನ್ನು ರದ್ದುಗೊಳಿಸಬೇಕು ಎಂದು ಕರುಣಾನಿಧಿ ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಭಾಕರನ್ ನನ್ನ ಆಪ್ತ ಸ್ನೇಹಿತ ಎಂದು ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದ ಕರುಣಾನಿಧಿ ವ್ಯಾಪಕ ಟೀಕೆ ಬಂದ ಹಿನ್ನೆಲೆಯಲ್ಲಿ ನಾನು ಹಾಗೆ ಹೇಳಿಲ್ಲ. ಮಾದ್ಯಮದವರು ತಪ್ಪಾಗಿ ಅರ್ಥೈಸಿ ಪ್ರಕಟಿಸಿದ್ದಾರೆ ಎಂದಿದ್ದರು. ರಾಜೀವ ಗಾಂಧಿ ಹತ್ಯೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಇನ್ನೊಂದು ಹೇಳಿಕೆ ನೀಡಿದ್ದರು.
(ದಟ್ಸ್
ಕನ್ನಡ
ವಾರ್ತೆ)
ರಾಜೀವ
ಹತ್ಯೆಯ
ಹಂತಕರನ್ನು
ಮರೆಯಲು
ಸಾಧ್ಯವೇ