ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ
ವರುಣ್ ಗಾಂಧಿ ಬಿಡುಗಡೆ ಬಿಜೆಪಿ ಪಕ್ಷಕ್ಕೆ ತಾತ್ಕಾಲಿಕ ಜಯ ಎಂದು ಪರಿಗಣಿಸಲಾಗಿದ್ದು, ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವರುಣ್ ಗಾಂಧಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾದಂತಾಗಿದೆ. ವರುಣ್ ಗಾಂಧಿ ವಿರುದ್ದ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಕ್ಕೆ ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಗುರುವಾರ ಸಂಜೆ ವರುಣ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದರು.
ಕಳೆದ ತಿಂಗಳು ಪಿಲಿಭಿತ್ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವರುಣ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ದಾಖಲಿಸಿತ್ತು. ವರುಣ್ ಗಾಂಧಿ ಹೇಳಿಕೆ ಹಾಗೂ ಬಂಧನ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು.
(ಏಜೆನ್ಸೀಸ್)
ವರುಣ್
ಗಾಂಧಿ
ವಿರುದ್ಧ
ಕ್ರಿಮಿನಲ್
ಮೊಕದ್ದಮೆ
ದಾಖಲು
ವರುಣ್
ಗಾಂಧಿ
ಬಂಧನ
ಪ್ರಹಸನಕ್ಕೆ
ಕ್ಷಣಗಣನೆ
ವರುಣ್
ಗಾಂಧಿ
ಬೆನ್ನಿಗೆ
ನಿಂತ
ಬಿಜೆಪಿ
ವರುಣ್
ಗಾಂಧಿ
ವಿರುದ್ದ
ಮತ್ತೆರಡು
ಪ್ರಕರಣ
ದಾಖಲು