ಏಳಿ ಏದ್ದೇಳಿ ಪರಿವರ್ತನೆಯಲ್ಲಿ ಪಾಲ್ಗೊಳ್ಳಿ!
ಬೆಂಗಳೂರು, ಏ. 16 : ಏಳಿ ಏದ್ದೇಳಿ, ಏಚ್ಚರಗೊಳ್ಳಿ, ಪರಿವರ್ತನೆಯಲ್ಲಿ ಪಾಲ್ಗೊಳ್ಳಿ..... ಇದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಗೋಪಿನಾಥ ಅವಲರ ಘೋಷವಾಕ್ಯ. ಬದಲಾವಣೆಗಾಗಿ ಮತ ಚಲಾಯಿಸಿ ಎಂದು ನಗರದ ಲಾಲ್ ಬಾಗ್, ಬನ್ನೇರುಘಟ್ಟ ರಸ್ತೆ, ಜಯನಗರದ 4ನೇ ಹಂತ, ಜಯದೇವ ಆಸ್ಪತ್ರೆ ಆಸುಪಾಸು ಬುಧವಾರ ಅವರು ಮತಯಾಚಿಸಿದರು.
ಹಳದಿ ಟಿ ಶರ್ಟ್ ಧರಿಸಿದ್ದ ಯುವಕರು ಕರಪತ್ರ ಹಂಚುತ್ತ ನಡೆದರೆ, ಕ್ಯಾಪ್ಟನ್ ಗೋಪಿನಾಥ್ ಮತದಾನ ಪ್ರತಿಯೊಬ್ಬರ ಹಕ್ಕು ಅದನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡುತ್ತಿದ್ದರು. ಎಲ್ಲ ರಾಜಕೀಯ ಪಕ್ಷಗಳೂ ಜಾತಿ, ಧರ್ಮದ ಆಧಾರದ ಮೇಲೆ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಇಂತಹ ಕುತಂತ್ರಕ್ಕೆ ಬಲಿಯಾಗಬೇಡಿ. ನಿಮ್ಮ ಮತವನ್ನು ಹಣ, ಹೆಂಡ, ಜಾತಿಗೆ ಮಾರಿಕೊಳ್ಳುವುದು ಬೇಡಿ ಎಂದು ಹೇಳುತ್ತಿದ್ದರು.
ಉತ್ತಮ ಸಮಾಜಕ್ಕೆ ಸೌಹಾರ್ದ ಮುಖ್ಯ. ಕೋಮುವಾದಿಗಳು, ಜಾತಿವಾದಿಗಳು ಸಾಮರಸ್ಯ ಕದಡುತ್ತಿರುವುದು ನಿಮಗೆ ಗೊತ್ತಿಲ್ಲವೇ ಎಂದು ಮತದಾರರನ್ನೇ ಅವರು ಪ್ರಶ್ನಿಸುತ್ತಿದ್ದರು. ಭಯೋತ್ಪಾದನೆ ಮನೆ ಬಾಗಿಲಿಗೆ ಬಂದು ನಿಂತಿದೆ. ಚಾಕು, ಚೂರಿ, ಸಂಸ್ಕಡತಿ ಬೇಕೆ, ಯೋಚಿಸಿ. ಮತದಾನದ ದಿನದಂದು ರಜೆ ಸಿಗುತ್ತದೆಂದು ಪಿಕ್ ನಿಕ್ ಹೋಗಬೇಡಿ. ತಪ್ಪದೇ ಮತ ಹಾಕಬೇಕು. ಮತ ಹಾಕುವ ಮುನ್ನ ಯೋಚಿಸಿ ಎಂದು ಗೋಪಿನಾಥ್ ಸಲಹೆ ನೀಡುತ್ತಿರುವ ದೃಶ್ಯ ಅವರ ಮತಯಾಚನೆ ಉದ್ದಕ್ಕೂ ಕಂಡುಬಂದಿತು.
(ದಟ್ಸ್ ಕನ್ನಡ ವಾರ್ತೆ)