ಬಂಗಾರಪ್ಪ ಮತ್ತವರ ಮಕ್ಕಳನ್ನು ಬಂಧಿಸಿ : ಸಿಎಂ
ದಾವಣಗೆರೆಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇಂಥ ಕೃತ್ಯದಲ್ಲಿ ತೊಡಗುವುದಿಲ್ಲ. ಶಿವಮೂಗ್ಗ ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಾರುಣ ಸೋಲು ಕಟ್ಟಿಟ್ಟಬುತ್ತಿ ಎಂದು ಭವಿಷ್ಯ ನುಡಿದರು. ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ನಿತ್ಯವೂ ಬಿಜೆಪಿ ವಿರುದ್ಧ ಒಂದಿಲ್ಲ ಒಂದು ಆರೋಪ ಮಾಡುತ್ತಲೇ ಬಂದಿದೆ. ಹಣ, ಹೆಂಡ ಜಾತಿಯಾಧಾರಿತವಾಗಿ ಬಿಜೆಪಿ ರಾಜಕೀಯ ಮಾಡಿಲ್ಲ. ಆ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು. ಆಧಾರ ರಹಿತವಾಗಿರುವ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ, ಜನರಲ್ಲಿ ಗೊಂದಲ ಉಂಟಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ತಮ್ಮ ಪುತ್ರ ರಾಘವೇಂದ್ರ ಸ್ಪರ್ಧೆ ಕುರಿತಂತೆ ಉತ್ತರಿಸಿದ ಯಡಿಯೂರಪ್ಪ, ಇದು ಶಿವಮೂಗ್ಗ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ವರಿಷ್ಠರ ತೀರ್ಮಾನ. ಯಾರ ಹಣೆಬರಹದಲ್ಲಿ ಏನು ಬರೆದಿರುತ್ತದೆಯೋ ಅದನ್ನು ತಪ್ಪಿಸಲು ಅಸಾಧ್ಯ. ಬಂಗಾರಪ್ಪ ಗಟ್ಟಿ ಅಸಾಮಿ. ಅವರನ್ನು ಸೋಲಿಸಲು ರಾಘವೇಂದ್ರ ಅವರನ್ನು ಪಕ್ಷ ಅಖಾಡಕ್ಕಿಳಿಸಿದೆ ಎಂದು ಅವರು ಸಮರ್ಥಿಸಿಕೊಂಡರು.
(ದಟ್ಸ್ ಕನ್ನಡ ವಾರ್ತೆ)