ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಗಾಂಧಿ ಸೋಲಿಸುವೆ, ರಿಯಾಜ್ ಅಹ್ಮದ್

By Staff
|
Google Oneindia Kannada News

ಪಿಲಿಭಿತ್, ಏ. 14 : ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ವಿರುದ್ಧ ಸಮಾಜವಾದಿ ಪಕ್ಷದ ಹುರಿಯಾಳು ರಿಯಾಜ್ ಅಹ್ಮದ್ ಘಟನೆ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವರುಣ್ ಗಾಂಧಿ ನನ್ನನ್ನು ಜಾಗತಿಕ ಮಟ್ಟದ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹೋಲಿಸಿದರೂ ನಾನು ಸುಮ್ಮನಿರುವೆ. ಇದು ಜನರ ಮನಸ್ಸಿಗೆ ತಾಕಿದ್ದು, ನನ್ನ ಗೆಲುವು ಖಚಿತ ಎಂದು ಸ್ಪಷ್ಟಪಡಿಸಿದರು.

ನಾನು ಶಾಂತಿಯಿಂದಿರುವುದೆ ಆತನ ಸೋಲಿಗೆ ಕಾರಣವಾಗುತ್ತಿದೆ. ವರುಣ್ ಕೋಮು ಪ್ರಚೋದಕ ಮಾತುಗಳಿಗೆ ನನ್ನ ಮೌನವೇ ಪ್ರಬಲ ಅಸ್ತ್ರ. ಇದೇ ಅಸ್ತ್ರಿದಿಂದ ಆತನನ್ನು ಸೋಲಿಸುವೆ ಎಂದು ರಿಯಾಜ್ ಅಹ್ಮದ್ ವಿಶ್ವಾಸದಿಂದ ಹೇಳಿದರು. ಈ ಘಟನೆಯಲ್ಲಿ ವರುಣ್ ಗಾಂಧಿ ಒಂದಪು ನೆಪ ಮಾತ್ರ. ಆದರೆ, ಭಾರತೀಯ ಜನತಾ ಪಕ್ಷ ಕೋಮು ಪ್ರಚೋದನೆ ಬೆಂಬಲಿಸುವುದನ್ನು ಇಡೀ ದೇಶದ ಕಣ್ಣಾರೆ ಕಂಡಿದೆ. ಪ್ರಸ್ತುತ ಲೋಕಸಭೆಯಲ್ಲಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ವರುಣ್ ಗಾಂಧಿ ಹಿಂದೂಗಳ ಮೇಲೆ ಕೈಯತ್ತಿದರೆ, ಕೈ ಕಡಿಯುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ವಿರುದ್ಧ ಸಮಾಜವಾಗಿ ಪಕ್ಷದಿಂದ ಸ್ಪರ್ಧಿಸಿರುವ ಒಸಾಮಾ ಬಿನ್ ಲಾಡೆನ್ ಅಂತವರನ್ನು ಸೋಲಿಸುವುದು ನನ್ನ ಏಕೈಕ ಗುರಿ ಎಂದು ಹೇಳಿದರು. ರಿಯಾಜ್ ಅಹ್ಮದ್ ಅವರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹೋಲಿಕೆ ಹೊಂದಿದ್ದಾರೆ.

ಪಿಲಿಭಿತ್ ಕ್ಷೇತ್ರದ ಸಂಸದೆಯಾಗಿದ್ದ ಮೇನಕಾ ಗಾಂಧಿ ವಿರುದ್ದ ಹರಿಹಾಯ್ದ ರಿಯಾಜ್ ಅಹ್ಮದ್, ಕೋಮು ಭಾವನೆ ಕೆರಳಿಸುವುದು ಜೊತೆಗೆ ತಮ್ಮ ಮಗನ ಘಟನೆಯನ್ನು ವಿವರಿಸಿ ಮತ ಕೇಳುವುದನ್ನು ಅವರು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎರಡು ಅವಧಿ ಈ ಕ್ಷೇತ್ರ ಸಂಸದೆಯಾಗಿರುವ ಮೇನಕಾ ಗಾಂಧಿ ಅವರ ಸಾಧನೆ ಏನೆಂಬುದು ಇಡೀ ಕ್ಷೇತ್ರದ ಜನತೆ ಗೊತ್ತಿದೆ ಎಂದು ರಿಯಾಜ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X