ದಾವಣಗೆರೆ : ಸಿದ್ದೇಶ್ ನಾಮಪತ್ರ ಅಂಗೀಕಾರ
ಬಿಜೆಪಿ ಅಭ್ಯರ್ಥಿ ಸಿದ್ದೇಶ್ ನಾಮಪತ್ರ ಪರಿಶೀಲನೆಗೆ ಪ್ರತಿಪಕ್ಷಗಳು ಆಕ್ಷೇಪಣೆ ಸಲ್ಲಿಸಿದ್ದವು. ಸಿದ್ದೇಶ್ ಅವರು ಸಂಸದ ನಿಧಿ ವೆಚ್ಚ ಮಾಡುವ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ತಮ್ಮ ಸಂಸ್ಥೆಯೊಂದರ ಮೂಲಕ ನಿಧಿ ವೆಚ್ಚ ಮಾಡಿದ್ದಾರೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶವೆಂದು ಹೇಳಲಾಗಿತ್ತು. ಈ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಸಿದ್ದೇಶ್ ಅವರಿಗೆ ನೋಟಿಸ್ ನೀಡಿದ್ದ ಚುನಾವಣಾಧಿಕಾರಿ ಮಂಜುನಾಥ ಸೋಮವಾರ ಬೆಳಗ್ಗೆ 10 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ನೋಟಿಸ್ ಗೆ ಉತ್ತರಿಸಿದ್ದ ಸಿದ್ದೇಶ್, ತಮ್ಮ ಮೇಲಿರುವ ಆರೋಪ ಸುಳ್ಳು ಎಂದು ಚುನಾವಣಾಧಿಕಾರಿಗಳ ತಿಳಿಸಿದ್ದರು. ನಂತರ ಇಂದು ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣೆ ಅಧಿಕಾರಿ ಸಿದ್ದೇಶ್ ಅವರ ನಾಮಪತ್ರ ಸ್ವೀಕರಿಸಿದರು.
ಲಘು ಲಾಠಿಪ್ರಹಾರ
ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಂ ಸಿದ್ದೇಶ್ ಅವರ ನಾಮಪತ್ರ ಅಂಗೀಕಾರ ಮಾಡಿಕೊಂಡಿರುವ ಕ್ರಮಕ್ಕೆ ತೀವ್ರ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕೈಕೈ ಮಿಲಾಯಿಸುವ ಹಂತ ತಲುಪಿದ್ದು, ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು