ಆಹಾರ ಮತ್ತು ನಾಗರೀಕ ಸಚಿವ ಹಾಲಪ್ಪ ಮೇಲೆ ಹಲ್ಲೆ?
ಸಚಿವರ ಮೇಲೆ ಹಲ್ಲೆ ನಡೆಸಲು ಮುಂದಾದ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಬೇಕಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಬಂಗಾರಪ್ಪ ವಿರುದ್ಧ ಮುಖ್ಯಮಂತ್ರಿಗಳ ಮಗ ಬಿ.ವೈ.ರಾಘವೇಂದ್ರ ಕಣಕ್ಕಿಳಿದು ಶಿವಮೊಗ್ಗ ಪ್ರತಿಷ್ಠಿತ ಕಣವಾಗಿದ್ದು. ಹಾಲಪ್ಪ ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಘಟನೆಯ
ಹಿನ್ನೆಲೆ
ಸುಮಾರು
ರು.6
ಲಕ್ಷ
ಮೌಲ್ಯದ
ಅಕ್ರಮ
ಮದ್ಯವನ್ನು
ಅಬಕಾರಿ
ಪೊಲೀಸರು
ಮತ್ತು
ಸೊರಬ
ಪೊಲೀಸರು
ವಶಪಡಿಸಿಕೊಂಡಿದ್ದರು.
ಸೊರಬದ
ಉಳವಿ
ಗ್ರಾಮದಲ್ಲೂ
ಅಕ್ರಮ
ಮದ್ಯ
ವಶಪಡಿಸಿಕೊಳ್ಳಲಾಗಿತ್ತು.
ಇದನ್ನು
ನೋಡಲು
ಸಾರ್ವಜನಿಕರು
ಜಮಾಯಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧೆಡೆ ಪ್ರಚಾರ ಕಾರ್ಯಕ್ರಮ ಕೈಗೊಂಡು ಉಳುವಿ ಗ್ರಾಮದ ಮೂಲಕ ಹಾಲಪ್ಪ ಹಿಂತಿರುಗುತ್ತಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ತಪ್ಪಾಗಿ ಅರ್ಥೈಸಿಕೊಂಡು ತಾಳ್ಮೆ ಕಳೆದುಕೊಂಡರು. ಸಚಿವರ ಪರ ಮತ್ತು ವಿರೋಧಿ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಒಂದು ಗುಂಪು ಸಚಿವರ ಮೇಲೆ ಹಲ್ಲೆಗೂ ಮುಂದಾಯಿತು. ತಕ್ಷಣ ಎಚ್ಚೆತ್ತುಕೊಂಡ ಸಚಿವರ ಅಂಗರಕ್ಷಕ ಮಾರುತಿ ಗಾಳಿಯಲ್ಲಿ ಗುಂಡು ಹಾರಿಸಿದರು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು