ಜಾತಿ ನೋಡಿ ಮತಹಾಕಬೇಡಿ, ಕ್ಯಾಪ್ಟನ್ ಗೋಪಿನಾಥ್
ಬಿಎಂಟಿಸಿ ಬಸ್ ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ತೆರಳಿ ಗೋಪಿನಾಥ್ ಪ್ರಚಾರ ಮಾಡುತ್ತಾರೆ. ಒಬ್ಬೊಬ್ಬರನ್ನೇ ಮಾತನಾಡಿಸಿ ಪರಿಚಯ ಮಾಡಿಕೊಳ್ಳುತ್ತಾರೆ. ತಾವು ಚುನಾವಣೆಗೆ ನಿಂತ ಉದ್ದೇಶವನ್ನು ಅವರಲ್ಲಿ ಹೇಳಿಕೊಳ್ಳುತ್ತಾರೆ. ಮಂಗಳವಾರ ಜಯನಗರ ಸೌತ್ ಎಂಡ್ ವೃತ್ತದಿಂದ ಬಸ್ ಹತ್ತಿದ ಕ್ಯಾಪ್ಟನ್, ಬನ್ನೇರು ಘಟ್ಟ ರಸ್ತೆ, ಹೊಸೂರು ರಸ್ತೆಗಳಲ್ಲಿ ಸಂಚರಿಸಿದರು. ಸ್ಲಲ್ಪ ದೂರ ಕ್ರಮಿಸಿ ಕೆಳಗಿಳಿದು ಅಲ್ಲಿ ಸಿಗುವ ಜನರೊಂದಿಗೂ ಮಾತಾಡಿ, ಮತ್ತೊಂದು ಬಸ್ ಹಿಡಿದು ಹೊರಡುವ ಕ್ರಮವನ್ನು ಅವರು ಅನುಸರಿಸುತ್ತಿದ್ದಾರೆ.
ಐಟಿಬಿಟಿ ಹಾಗೂ ಇತರ ವಲಯದ ಉದ್ಯೋಗಿಗಳನ್ನು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವೊಲಿಸುವುದು. ಜಾತಿ ಹಾಗೂ ದುಡ್ಡಿಗೆ ಮರುಳಾಗದಂತೆ ಜನ ಸಾಮಾನ್ಯರಿಗೆ ತಿಳುವಳಿಕೆ ಕೂಡುವುದು ಮುಖ್ಯ ಉದ್ದೇಶ ಎನ್ನುತ್ತಾರೆ ಗೋಪಿನಾಥ್. ಮತದಾರರ ಪಟ್ಟಿಯಲ್ಲಿ ತಪ್ಪದೇ ಹೆಸರನ್ನು ನೋಂದಾಯಿಸಿ, ಮತದಾನದ ದಿನ ಪಿಕ್ ನಿಕ್ ಗೆ ಹೋಗಬೇಡಿ. ಬದಲಾವಣೆಗಾಗಿ ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು