ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು ಗೌರಿಶಂಕರ ಸ್ವಾಮೀಜಿಗಳಿಗೆ ಜೀವ ಬೆದರಿಕೆ
ತುಮಕೂರು ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮೂಲಕ ಅಖಾಡಕ್ಕೆ ಇಳಿದಿರುವ ನನಗೆ ಅನೇಕ ಬೆದರಿಕೆ ಕರೆಗಳು ಬಂದಿವೆ. ಕೂಡಲೇ ನಾಮಪತ್ರ ವಾಪಸ್ ಪಡೆಯದಿದ್ದರೆ ಪರಿಸ್ಥಿತಿ ನೆಟ್ಟಗಿರುವುದು ಎಂದು ಜೀವ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಕೆಲ ಹಿತಾಸಕ್ತಿಗಳು ನನ್ನ ವಿರುದ್ಧ ಬಾರಿ ಸಂಚು ರೂಪಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಯಾವ ಕಾರಣಕ್ಕೂ ನಾನು ನಾಮಪತ್ರವನ್ನು ಹಿಂದಕ್ಕೆ ಪಡೆಯುವುದಿಲ್ಲ. ನನ್ನ ಸ್ಪರ್ಧೆ ಖಚಿತ ಎಂದು ಹೇಳಿದರು.
ಜನ ಕಲ್ಯಾಣಕ್ಕಾಗಿ ರಾಜಕೀಯ ಇಳಿದಿರುವೆ. ನನಗೆ ಯಾವ ಆಸೆ, ಅಮಿಷಗಳನ್ನು ಹಮ್ಮು ಬಿಮ್ಮು ಇಲ್ಲ. ಸನ್ಯಾಸಿಯಾಗಿರುವ ನಾನು ಜೀವವಿರುವವರೆಗೂ ಜನರ ಹಿತಕ್ಕಾಗಿ ಬಡಿದಾಡುವೆ ಎಂದು ಸ್ವಾಮೀಜಿಗಳು ಹೇಳಿದರು. ದೇಶದ ಹಿತಕ್ಕೆ ಸ್ವಾಮೀಜಿಗಳು ಕೂಡಾ ರಾಜಕೀಯಕ್ಕೆ ಇಳಿಯವುದು ತಪ್ಪಲ್ಲ ಎಂದು ಗೌರಿಶಂಕರ ಸ್ವಾಮೀಜಿಗಳು ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು
Comments
ತುಮಕೂರು ಬೆದರಿಕೆ ಕರೆ ಸಮಾಜವಾದಿ ಪಕ್ಷ samajwadi party lok sabha election 2009 ಗೌರಿಶಂಕರ ಸ್ವಾಮೀಜಿ ಲೋಕಸಭೆ ಚುನಾವಣೆ 2009
Story first published: Wednesday, April 8, 2009, 17:34 [IST]