ಅಡ್ವಾಣಿ ಬಲಹೀನ ನಾಯಕ: ಸೋನಿಯಾ ಗಾಂಧಿ
ಕರಿಂನಗರದಲ್ಲಿ ಚುನಾವಣೆ ಪ್ರಚಾರ ಸಭೆ ಪಾಲ್ಗೊಂಡ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಮನಮೋಹನ್ ಸಿಂಗ್ ಅವರನ್ನು ಬಲಹೀನ ಪ್ರಧಾನಮಂತ್ರಿ ಎಂದು ಜರಿಯಲು ಅವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದ ಸೋನಿಯಾ, ಎನ್ ಡಿಎ ಆಡಳಿತದಲ್ಲಿದ್ದಾಗ ಅಡ್ವಾಣಿ ಕೇಂದ್ರದ ಗೃಹ ಸಚಿವರಾಗಿದ್ದರು. ಆಗ ಏನಾಯಿತು ಎಂದು ಕಿಡಕಾರಿದ ಅವರು, ಕಂದಹಾರ್ ನಲ್ಲಿ ಅಪಹರಣ ಪ್ರಕರಣ ನಡೆಯಿತು. ದೇಶದ ಹೃದಯಭಾಗ ಸಂಸತ್ತಿನ ಮೇಲೆ ದಾಳಿ ನಡೆದಿದ್ದು ಸುಳ್ಳೇ ಇದೀಗ ಹೇಳಿ ಯಾರು ಬಲಹೀನ ಮುಖಂಡರು ಎಂದು ಸೋನಿಯಾ ಗಾಂಧಿ ಬಿಜೆಪಿ ಮತ್ತು ಅದರ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ದೇಶ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯಬೇಕಾದರೆ ಮನಮೋಹನ್ ಸಿಂಗ್ ಅವರ ಸಮರ್ಥ ನಾಯತಕ್ವವೇ ಕಾರಣ. ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಎನಿಸಿರುವ ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಅವರ ದೂರದೃಷ್ಟಿ ಫಲವಾಗಿ ಇಂದು ಆರ್ಥಿಕ ಹಿಂಜರಿತದಿಂದ ಭಾರತ ಕೆಂಗಟ್ಟಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಭಯೋತ್ಪಾದನೆ ಹಾಗಬ ಭಯೋತ್ಪದಕರ ಬಗ್ಗೆ ಮೃದುಧೋರಣೆ ಹೊಂದಿಲ್ಲ. ದೇಶದ್ರೋಹಿ ಕೃತ್ಯ ಎಸಗುವವರನ್ನು ಖಂಡಿತವಾಗಿಯು ಮಟ್ಟಹಾಕಲು ಕಾಂಗ್ರೆಸ್ ಸಿದ್ದ ಎಂದು ಸೋನಿಯಾ ಗಾಂಧಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)