ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ವಿರುದ್ಧಲಾಲು ಕೆಂಡಾಮಂಡಲ

By Staff
|
Google Oneindia Kannada News

ಕಿಶನ್ ಗಂಜ್, ಏ. 7 : ನಾನು ಗೃಹ ಸಚಿವನಾಗಿದ್ದರೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಪಿಲಿಭಿತ್ ನ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿಯನ್ನು ನುಜ್ಜು ಗುಜ್ಜು ಮಾಡುತ್ತಿದ್ದೆ ಎಂದು ಆರ್ ಜೆಡಿ ಮುಖ್ಯಸ್ಥ ಹಾಗೂ ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಸೋಮವಾರ ಇಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

2004ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರ ಪಡೆಯಲು ಕೋಮುವಾದಿ ಬಿಜೆಪಿ ನಡೆಸಿದ ಯತ್ನಗಳು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ದೊಡ್ಡ ಪ್ರಕರಣವಾಗಿಸಿದ್ದಕ್ಕೆ ತಾನು ಮತ್ತು ತನ್ನ ಪಕ್ಷ ಎಷ್ಟು ಹತಾಶೆಗೊಂಡಿತ್ತು ಎಂಬುದನ್ನು ನೆನೆಪಿಸಿಕೊಂಡರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಲಾಲು, ಬಾಬ್ರಿ ಮಸೀದಿ ಧ್ವಂಸದಲ್ಲಿ ನೇರವಾಗಿ ಭಾಗಿಯಾಗಿರುವ ಅಡ್ವಾಣಿಯವರ ತೊಡೆಯ ಮೇಲೆ ನತೀಶ್ ಕುಳಿತುಕೊಂಡಿದ್ದಾರೆ ಲೇವಡಿ ಮಾಡಿದರು.

ನಿತೀಶ್ ಕುಮಾರ್ ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಎಲ್ ಜೆಪಿ ಅಧ್ಯಕ್ಷ ರಾಂ ವಿಲಾಸ್ ಪಾಸ್ವಾನ್ ಆರೋಪಿಸಿದರಲ್ಲದೆ, ಜಾತ್ಯಾತೀತ ರಂಗಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X